ಪಾಲಡ್ಕದಲ್ಲಿ ತೋಡು ದುರಸ್ತಿ ಕಾಮಗಾರಿಗೆ ಚಾಲನೆ
ಮೂಡುಬಿದಿರೆ, ಅ.3: ಸರ್ವಧರ್ಮ ಹಾಗೂ ಎಲ್ಲ ಪಕ್ಷದ ಮುಖಂಡರು, ಸ್ಥಳೀಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವ ಪಾಲಡ್ಕ ತೋಡು ದುರಸ್ತಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು.
ಅರ್ಬಿ ಅಣೆಕಟ್ಟು, ತೋಡು ದುರಸ್ತಿ ಸಮಿತಿ ಹಾಗೂ ಪಾಲಡ್ಕ, ಕಂಡದಲೆ, ಪುತ್ತಿಗೆ ಗ್ರಾಮಸ್ಥರ ನೇತೃತ್ವದಲ್ಲಿ ನಡೆಯುವ ಕಾಮಗಾರಿಗೆ ಪಾಲಡ್ಕ ಚರ್ಚ್ ಬಳಿಯ ಕಲ್ಲ ಸಂಕದಲ್ಲಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಚಾಲನೆ ನೀಡಿ ಪಾಲಡ್ಕ ಚರ್ಚ್ ಧರ್ಮಗುರುಗಳ ಸಮಾಜಮುಖಿ ಚಿಂತನೆಯಿಂದ ಗ್ರಾಮಸ್ಥರು ಒಟ್ಟು ಸೇರಿ ಉತ್ತಮ ಕೆಲಸವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ರಾಜ್ಯ ಸರಕಾರ ಹಾಗೂ ಜಿಲ್ಲಾ ಪಂಚಾಯತ್ ಅರ್ಬಿ ಅಣೆಕಟ್ಟು ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಪುತ್ತಿಗೆ ಹಾಗೂ ಪಾಲಡ್ಕ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಸಲಹೆಯಿತ್ತರು.
ಪಾಲಡ್ಕ ಚರ್ಚ್ ಧರ್ಮಗುರು, ಸಮಿತಿಯ ಸಂಚಾಲಕ ರೆ.ಫಾ. ಮೈಕಲ್ ಐವನ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವಧರ್ಮದವರು ಒಗ್ಗೂಡಿ ಕಾಮಗಾರಿಗಳನ್ನು ಮಾಡುವುದರಿಂದ ಪಾಲಡ್ಕ ಗ್ರಾಮಸ್ಥರ ಅಭಿವೃದ್ಧಿ ಜೊತೆಗೆ ಸೌಹಾರ್ದತೆಯೂ ಮೂಡುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಅರ್ಬಿಕಟ್ಟೆ ಅಣೆಕಟ್ಟು ಕಾಮಗಾರಿಗೆ ಜಿಲ್ಲಾ ಪಂಚಾಯತ್ನಿಂದ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದೆಂದು ಭರವಸೆಯಿತ್ತರು.
ಅಮರನಾಥ ಶೆಟ್ಟಿ ಹಾಗೂ ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಪಿರೇರಾ, ಕಾಮಗಾರಿಗೆ ತಲಾ 5 ಸಾವಿರ ರೂ. ಧನಸಹಾಯ ನೀಡಿದರು.
ತಾ.ಪಂ ಸದಸ್ಯೆ ವನಿತಾ ನಾಯ್ಕೆ, ಪಾಲಡ್ಕ ಪಂಚಾಯತ್ ಸದಸ್ಯರಾದ ಸವಿತಾ ಟಿ.ಎನ್, ವಿಲ್ಫ್ರೆಡ್, ರಾಜೇಶ್ ಅರಾನ್ಹ, ಜಗದೀಶ್ ಕೋಟ್ಯಾನ್, ಪ್ರವೀಣ್ ಸಿಕ್ವೇರಾ, ಪುತ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶುಭಾ ಹೆಬ್ಬಾರ್, ಸದಸ್ಯರಾದ ನಾಗವರ್ಮ ಜೈನ್, ಶಶಿಧರ್ ನಾಯಕ್, ವೀಣಾ ನಾಯಕ್, ಪ್ರೆಸಿಲ್ಲಾ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್, ಸಮಿತಿ ಸದಸ್ಯರಾದ ಆಂಡ್ರೂ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ನವೀನ್ ಸತ್ಪಾಲ್ ವಂದಿಸಿದರು.