ಕಾಸರಗೋಡು: ಬಿಜೆಪಿ ನಾಯಕತ್ವ ಸಮಾವೇಶ
ಕಾಸರಗೋಡು : ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಸಮಾವೇಶ ಕಾಸರಗೋಡಿನಲ್ಲಿ ನಡೆಯಿತು . ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ. ಕೆ ಕೃಷ್ಣದಾಸ್ ಸಮಾವೇಶವನ್ನು ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು , ಕೇರಳದಲ್ಲಿ ಬಿ ಜೆ ಪಿಗೆ ಅನುಕೂಲಕರ ವಾತಾವರಣ ಇದ್ದು , ಮೂರು ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕ ಕಾರ್ಯಕರ್ತರು ಸಜ್ಜಾಗುವಂತೆ ಕರೆ ನೀಡಿದರು
ಎಂ . ಸಂಜೀವ ಶೆಟ್ಟಿ , ಎಂ . ಕುಮಾರನ್ , ಪ್ರಮೀಳ ಸಿ. ನಾಯಕ್, ಪಿ. ರಮೇಶ್ , ಪಿ. ಸುರೇಶ್ ಕುಮಾರ್ ಶೆಟ್ಟಿ , ಕೆ. ಶ್ರೀಕಾಂತ್ ಮೊದಲಾದವರು ಮಾತನಾಡಿದರು
Next Story