ಬೆಳುವಾಯಿ: ಜಮೀಯ್ಯತುಲ್ ಫಲಾಹ್ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಶಿಲಾನ್ಯಾಸ
ಮೂಡುಬಿದಿರೆ, ನ.8: ರಾಜ್ಯ ಪ್ರಶಸ್ತಿ ಪಡೆದ ಸರಕಾರೇತರ ಸಂಸ್ಥೆ ಜಮೀಯ್ಯತುಲ್ ಫಲಾಹ್ ದ.ಕ., ಉಡುಪಿ ಜಿಲ್ಲೆ ಮತ್ತು ಮೂಡುಬಿದಿರೆಯ ಜಮೀಯ್ಯತುಲ್ ಫಲಾಹ್ ಇದರ ವತಿಯಿಂದ ಬೆಳುವಾಯಿಯ ಚಿಲಿಂಬಿಯಲ್ಲಿ ನಿರ್ಮಾಣಗೊಳ್ಳಲಿರುವ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಶಾಸಕ ಕೆ.ಅಭಯಚಂದ್ರ ಜೈನ್ ರವಿವಾರ ಶಿಲಾನ್ಯಾಸಗೈದರು.
ಮೂಡುಬಿದಿರೆ ಜುಮಾ ಮಸೀದಿಯ ಖತೀಬ್ ವೌಲಾನಾ ಮುಹಮ್ಮದ್ ಮುಸ್ತಫಾ ಯಮಾನಿ ದುಆ ನೆರವೇರಿಸಿದರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಕಟ್ಟಡದ ನೀಲ ನಕಾಶೆಯನ್ನು ಅನಾವರಣಗೊಳಿಸಿದರು. ದ.ಕ. ಉಡುಪಿ ಜಿಲ್ಲೆಯ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಬೆಳುವಾಯಿ ಗ್ರಾಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ಕೆ.ಪಿ.ಜಗದೀಶ ಅಧಿಕಾರಿ, ಜಮೀಯತುಲ್ ಫಲಾಹ್ನ ಸ್ಥಾಪಕ ಮುಹಮ್ಮದ್ ಇಕ್ಬಾಲ್ ಯೂಸುಫ್, ಎನ್ಆರ್ಸಿಸಿಯ ಅಮೀರ್ ಮನ್ಸೂರ್ ಅಲಿ ಅಹ್ಮದ್, ಸ್ಥಾಪಕ ಸದಸ್ಯ ಅಬ್ದುಲ್ ಖಾದರ್, ಉದ್ಯಮಿ ಮುಸ್ತಫಾ ಎಸ್.ಎಂ., ಮುಂಬೈ ಘಟಕದ ಮುಹಮ್ಮದ್ ಸಲೀಮ್, ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಮೀಯ್ಯತುಲ್ ಫಲಾಹ್ನ ಶೈಖ್ ಅಬ್ದುಲ್ ಗಫೂರ್, ಝಮೀರ್ ಅಂಬರ್ ಸಿ.ಎ., ಸಲೀಮ್ ಹಂಡೆಲ್ ಉಪಸ್ಥಿತರಿದ್ದರು. ಮೂಡುಬಿದಿರೆ ವಲಯ ಘಟಕದ ಅಧ್ಯಕ್ಷ ಅಬ್ದುರ್ರವೂಫ್ ಸ್ವಾಗತಿಸಿದರು. ಹಸ್ದುಲ್ಲಾ ಇಸ್ಮಾಯೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಯದ್ ಝುಬೈರ್ ಷಾ ವಂದಿಸಿದರು.