ನ.18ರ ಜೈಲ್ ಭರೋಗೆ ಸಿಐಟಿಯು ಬೆಂಬಲ
ಮಂಗಳೂರು, ನ.13: ಭೂಮಿಯ ಬೆಲೆ ಹೆಚ್ಚಿರುವ ಈ ದಿನಗಳಲ್ಲಿ ಬಡ ನಿವೇಶನ ರಹಿತರಿಗೆ ಸರಕಾರ ಉಚಿತವಾಗಿ ನಿವೇಶನ ಮತ್ತು ಮನೆಯನ್ನು ಕಟ್ಟಿಸಿ ಕೊಡಬೇಕು, ಸರಕಾರಿ ಜಾಗದಲ್ಲಿ ಮನೆ ಕಟ್ಟಿಸಿಕೊಂಡಿರುವವರಿಗೆ ಅದನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು, ಸರಕಾರಿ ಜಮೀನಿನಲ್ಲಿ ಬಗರ್ಹುಕುಂ ಸಾಗುವಳಿ ಮಾಡಿ ಅಭಿವೃದ್ಧಿಪಡಿಸಿರುವುದನ್ನು ಸಕ್ರಮಗೊಳಿಸಬೇಕು ಎಂಬ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ನೇತೃತ್ವದಲ್ಲಿ ನ.18ರಂದು ಬೆಳಗ್ಗೆ 10:30ಕ್ಕೆ ಮಂಗಳೂರು ವಿಧಾನ ಸೌಧದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿಗೆ ನಡೆಯುವ ರ್ಯಾಲಿ, ಜೈಲ್ ಭರೋ ಚಳವಳಿಗೆ ಸಿಐಟಿಯು ದ.ಕ.ಜಿಲ್ಲಾ ಸಮಿತಿ ಬೆಂಬಲ ಘೋಷಿಸಿದೆ ಎಂದು ಪ್ರಕಟನೆ ತಿಳಿಸಿದೆ.
Next Story