ಮಾನವ ಹಕ್ಕು ಆಯೋಗಕ್ಕೆ ಅಭಿನಂದನೆ
ಮಂಗಳೂರು, ಡಿ.18: ಕಳೆದ ಮೂರು ವರ್ಷಗಳಿಂದ ಸ್ಟೇಟ್ಬ್ಯಾಂಕ್ ಬಳಿಯ ಫುಟ್ಪಾತ್ಗೆ ಕಬ್ಬಿಣದ ಸರಳುಗಳನ್ನು ಹಾಕಿ ದಾರಿ ತಡೆ ಹಿಡಿದ ಕ್ರಮವನ್ನು ಖಂಡಿಸಿ ಮತ್ತು ಇದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸಲ್ಲಿಸಿದ ಮನವಿಗೆ ಮಾನವ ಹಕ್ಕು ಆಯೋಗದ ಸದಸ್ಯ ಸಿ.ಜೆ.ಹುನಗಂದ ಸ್ಪಂದಿಸಿದ್ದಾರೆ.
ಮನವಿಯ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮಾನವ ಹಕ್ಕು ಆಯೋಗ ಸೂಚಿಸಿದ ಹಿನ್ನೆಲೆಯಲ್ಲಿ ಇದೀಗ ಕಬ್ಬಿಣದ ಸರಳುಗಳನ್ನು ತೆರವುಗೊಳಿಸಲಾಗಿದೆ. ಇದಕ್ಕಾಗಿ ಮಾನವ ಹಕ್ಕು ಆಯೋಗವನ್ನು ಮನವಿದಾರ ಬಿ.ಎಸ್.ಹಸನಬ್ಬ ಅಮ್ಮೆಂಬಳ ಅಭಿನಂದಿಸಿದ್ದಾರೆ.
Next Story