‘ಮದರಂಗಿ’ಯಿಂದ ಝೈನಿಗೆ ಅಭಿನಂದನಾ ಕಾರ್ಯಕ್ರಮ
ಮಂಗಳೂರು, ಜ.9: ಸುನ್ನೀ ಸಂಘಟಕ ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಅಪ್ರತಿಮ ಭಾಷಣಕಾರ. ಎಲ್ಲ್ಲ ಮತ ಬಾಂಧವರ ಸೌಹಾರ್ದಕ್ಕೆ ಇವರ ಭಾಷಣ ಪ್ರೇರಕವಾಗಿದೆ ಎಂದು ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಅಭಿಪ್ರಾಯಪಟ್ಟರು
ದಶ ಸಂಭ್ರಮದಲ್ಲಿರುವ ಕೌಟುಂಬಿಕ ಮಾಸಿಕ ಮದರಂಗಿ ಕಚೇರಿಯಲ್ಲಿ ಮೌಲೀದ್ ಪಾರಾಯಣ ಹಾಗೂ ಇತ್ತೀಚೆಗೆ ಯುಎಇಯಲ್ಲಿ ಶೈಖ್ ಝಾಹಿದ್ ಸದ್ಭಾವನಾ ಪ್ರಶಸ್ತಿಗೆ ಪಾತ್ರರಾದ ಝೈನಿ ಕಾಮಿಲ್ರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಿವಾಸಿ ಉದ್ಯಮಿ ಮಾಝ್ ಗ್ರೂಪ್ಆಫ್ ಕಾರ್ಪೊರೇಟರ್ನ ಮೆನೇಜಿಂಗ್ ಡೈರೆಕ್ಟರ್ ಮೆಹಬೂಬ್ ಅಹ್ಮದ್ರವರು ಝೈನಿಯನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಮದರಂಗಿ ಪ್ರಕಾಶಕ ಡಿ.ಐ.ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಯುವ ಉದ್ಯಮಿ ಅಬ್ದುಸ್ಸಮದ್, ಬಾವ ಮರವೂರು, ಅಶ್ರಫ್ ಸಖಾಫಿ ಉರ್ಣಿ ಮುಂತಾದವರು ಉಪಸ್ಥಿತರಿದ್ದರು. ಸಹಾಯಕ ಸಂಪಾದಕ ಎ.ಕೆ. ನಂದಾವರ ವಂದಿಸಿದರು.
Next Story