ಟಿಪ್ಪರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಬಲಿ
ಮೂಡುಬಿದಿರೆ, ಜ.11: ಟಿಪ್ಪರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮೂಡುಬಿದಿರೆ-ಬಿ.ಸಿ.ರೋಡು ರಾಜ್ಯ ಹೆದ್ದಾರಿಯ ಪೇಪರ್ಮಿಲ್ ಎಂಬಲ್ಲಿ ನಡೆದಿದೆ.
ಸಿದ್ದಕಟ್ಟೆ ಸಂಗಬೆಟ್ಟುವಿನ ಥೋಮಸ್ ಡಿಸೋಜ ಅವರ ಪುತ್ರ ಅರುಣ್ ಡಿಸೋಜ(38) ಮೃತಪಟ್ಟ ಯುವಕ. ಇವರು ಬುಧವಾರ ಬೆಳಗ್ಗೆ ಸಿದ್ದಕಟ್ಟೆ ಚರ್ಚ್ನ ಕೆಲಸ ನಿಮಿತ್ತ ತನ್ನ ಸಹೋದರ ರೋಶನ್ ಡಿಸೋಜ ಜತೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರೆನ್ನಲಾಗಿದೆ.
ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ಎಂಬಲ್ಲಿ ವಾಹನಕ್ಕೆ ನಾಯಿಯೊಂದು ಅಡ್ಡ ಬಂದಿದ್ದು, ತಪ್ಪಿಸಲೆತ್ನಿಸಿದಾಗ ಅದೇ ವೇಳೆ ಮೂಡುಬಿದಿರೆ ಕಡೆ ಬರುತ್ತಿದ್ದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತು. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಟಿಪ್ಪರ್ನಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಟಿಪ್ಪರ್ ಚಾಲಕ ರಾಮಪೂಜಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
* ಮಾನವೀಯತೆ ಮೆರೆದ ರಿಕ್ಷಾ ಚಾಲಕರು: ಅಪಘಾತ ನಡೆದ ಮೂಡುಬಿದಿರೆ ರಿಕ್ಷಾ ಪಾರ್ಕ್ನ ಚಾಲಕ ಅಶೋಕ್, ಕೊಡಂಗಲ್ಲು ಪಾರ್ಕ್ನ ಮುಹಮ್ಮದ್ ಇಮ್ರಾನ್ ಎಂಬವರು ಸೇರಿ ಗಾಯಾಳುವನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೆಸ್ಕಾಂ ಬಳಿ 108 ಆ್ಯಂಬುಲೆನ್ಸ್ ಎದುರಾದಾಗ ಅದಕ್ಕೆ ಬದಲಾಯಿಸಲಾಯಿತು.