ಪ್ರಾಕೃತಿಕ ವಿಕೋಪ ಸನ್ನದ್ಧತೆಗೆ ಅಣಕು ಕಾರ್ಯಾಚರಣೆ
ಉಡುಪಿ, ಮೇ 16: ಜಿಲ್ಲೆಯಲ್ಲಿ ಮೇ 18ರಿಂದ 31ರವರೆಗೆ ಪ್ರಾಕೃತಿಕ ವಿಕೋಪವನ್ನು ಎದುರಿಸುವ ಸಿದ್ಧತೆ ಸಂಬಂಧ ಜಾಗೃತಿ/ಸನ್ನದ್ಧತೆಯ ಕುರಿತು ವಿವಿಧೆಡೆ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೇ 18ರಂದು ಎಸ್ಎಂಎಸ್ ಕಾಲೇಜು ಬ್ರಹ್ಮಾವರ, 19: ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿ, 22: ದಂಡತೀರ್ಥ ಗ್ರೂಪ್ ಆಫ್ ಎಜುಕೇಶನ್ ಕಾಪು, 24: ಸರಕಾರಿ ಐಟಿಐ ಕಾಲೇಜು ಅಲೆವೂರು, 25: ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನ ಅಲೆವೂರು, 29: ಶ್ರೀಮಧ್ವ ವಾದಿರಾಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಂಟಕಲ್, 30: ನಿಟ್ಟೆ ಎಜುಕೇಶನ್ ನಿಟ್ಟೆ ಕಾರ್ಕಳ, 31: ಜಿಲ್ಲಾಧಿಕಾರಿ ಕಚೇರಿ ಮಣಿಪಾಲ ಇಲ್ಲಿ ಕಾರ್ಯಾಗಾರ ಬೆಳಗ್ಗೆ 10ರಿಂದ 11:30ರವರೆಗೆ ನಡೆಯಲಿದೆ.
Next Story