ಕೇರಳ ಸರಕಾರದ ವಿರುದ್ಧ ಜು.1ರಂದು ಯುಡಿಎಫ್ ಜಾಥಾ
ಕಾಸರಗೋಡು, ಜೂ.30: ರಾಜ್ಯ ಸರಕಾರದ ಮದ್ಯನೀತಿ, ಶಿಕ್ಷಣ ವ್ಯಾಪಾರೀಕರಣ, ಕೇಂದ್ರ ಸರಕಾರದ ಅಲ್ಪಸಂಖ್ಯಾತ, ದಲಿತ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜು.1ರಂದು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ನಡೆಸಲಿದೆ.
ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಜಾಥಾವನ್ನು ಎ.ಐ.ಸಿ.ಸಿ. ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್ ಉದ್ಘಾಟಿಸುವರು.
ಅದಕ್ಕೂ ಮೊದಲು ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಕಾರ್ಯಕರ್ತರ ಮೆರವಣಿಗೆ ನಡೆಯಲಿದೆ.
Next Story