ಕಂಡ್ಲೂರು: ಶಾಖಾ ಸಮ್ಮೇಳನದ ಬಹಿರಂಗ ಸಭೆ
ಕುಂದಾಪುರ, ಅ.20: ಕಂಡ್ಲೂರು, ಮುಳ್ಳಿಕಟ್ಟೆ, ನೆಲ್ಲಿಕಟ್ಟೆ ಶಾಖಾ ಸಮ್ಮೇಳನದ ಪ್ರಯುಕ್ತ ಬಹಿರಂಗ ಸಭೆಯು ಇತ್ತೀಚೆಗೆ ಕಂಡ್ಲೂರಿನಲ್ಲಿ ರಮೇಶ ಸೌಕೂರು ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ಧೋರಣೆಗಳನ್ನು ಖಂಡಿಸಿ, ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟಕ್ಕೆ ಸಜ್ಜಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೇಂದ್ರ ಸರಕಾರ ಜಾರಿಗೆ ತಂದ ನೋಟ್ ರದ್ದತಿ ಮತ್ತು ಜಿಎಸ್ಟಿಯಿಂದ ಜನ ಸಾಮಾನ್ಯರಿಗೆ ಆಗಿರುವ ತೊಂದರೆಗಳನ್ನು ವಿವರಿಸಿದರು. ವಲಯ ಕಾರ್ಯದರ್ಶಿ ಎಚ್.ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮಹಾಬಲ ವಡೇರಹೋಬಳಿ, ಹೆಂಚು ಕಾರ್ಮಿಕ ಮುಖಂಡ ದಯಾನಂದ ಉಪಸ್ಥಿತರಿದ್ದರು.
Next Story