ಶ್ರೀರಾಮುಲು ಉಮೇದುವಾರಿಕೆ ರದ್ದುಗೊಳಿಸಲು ಎಸ್.ಆರ್. ಹಿರೇಮಠ ಆಗ್ರಹ
ಹುಬ್ಬಳ್ಳಿ, ಮೇ 14: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಿಡುಗಡೆಗೆ ಸುಪ್ರೀಂ ಕೋರ್ಟಿನ ಅಂದಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರಿಗೆ ಲಂಚದ ಆಮಿಷವೊಡ್ಡಿದ ಬಿ.ಶ್ರೀರಾಮುಲು, ಟಿ.ಎಚ್.ಸುರೇಶಬಾಬು ಉಮೇದುವಾರಿಕೆ ರದ್ದುಪಡಿಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಬ್ಬರ ವಿರುದ್ಧವೂ ಗಂಭೀರ ಸ್ವರೂಪದ ಪ್ರಕರಣಗಳಿವೆ. ಮುಖ್ಯ ನ್ಯಾಯಮೂರ್ತಿ ಅವರಿಗೆ 160 ಕೋಟಿ ರೂ.ಹಣದ ಆಮಿಷವೊಡ್ಡಲು ಮುಂದಾಗಿದ್ದರು ಎಂದು ಹೇಳಿದರು.
ಇಂತಹ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿ ಇರಬಾರದು. ಅಲ್ಲದೆ, ಇಂಥ ವ್ಯಕ್ತಿಗಳು ಜಪ್ರತಿನಿಧಿಗಳಾಗಿ ಆಯ್ಕೆಯಾಗುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಆದುದರಿಂದ ಶ್ರೀರಾಮುಲು ಹಾಗೂ ಸುರೇಶ್ ಬಾಬು ಅವರ ಉಮೇದುವಾರಿಕೆ ರದ್ದುಪಡಿಸಬೇಕು ಎಂದು ಚುನಾವಣಾ ಆಯೋಗವನ್ನು ಕೋರಿದರು.
Next Story