ಸಿದ್ದಗಂಗಾ ಸ್ವಾಮೀಜಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಬೆಂಗಳೂರು ,ಡಿ.2: ಅನಾರೋಗ್ಯದ ಕಾರಣದಿಂದಾಗಿ ಬಿ.ಜಿ.ಎಸ್. ಆಸ್ಪತ್ರೆಗೆ ದಾಖಲಾಗಿರುವ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಶ್ರೀಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೊಸ ಸ್ಟೆಂಟ್ ಅಳವಡಿಕೆಯ ಬಳಿಕ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದೆ.
ಶಸ್ತ್ರ ಚಿಕಿತ್ಸೆ ಇಲ್ಲದೆ ಶ್ರೀಗಳಿಗೆ ಎಂಡೋಸ್ಕೋಪಿ ಮೂಲಕ ಎರಡು ಸ್ಟೆಂಟ್ ಅಳವಡಿಸಲಾಗಿದೆ. ಈ ಹಿಂದೆ 9 ಸ್ಟೆಂಟ್ ಗಳನ್ನು ಅಳಡಿವಡಿಸಲಾಗಿತ್ತು. ಈ ಪೈಕಿ ಎರಡು ಸ್ಟೆಂಟ್ ಗಳು ಬಿದ್ದು ಹೋಗಿವೆ.
ಜ್ವರದಿಂದ ಬಳಲುತ್ತಿರುವ ಶ್ರೀಗಳನ್ನು ಬಿಜೆಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳ ಪಿತ್ತಕೋಶ ಮತ್ತು ಪಿತ್ತನಾಳದಲ್ಲಿ ಉಂಟಾಗಿದ್ದ ಸೋಂಕು ಇದೀಗ ಕಡಿಮೆಯಾಗಿದೆ. ಚಿಕಿತ್ಸೆಯ ಬಳಿಕ ಅವರು ಅರಾಮವಾಗಿದ್ದಾರೆ. ವಾರ್ಡ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
Next Story