ಶೋಷಿತರ ಪರ ಕೆಲಸ ಮಾಡಿದವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ: ಸಿದ್ದರಾಮಯ್ಯ
ಬೆಂಗಳೂರು, ಜೂ. 6: ‘ಬಡವರು, ಶೋಷಿತರು ಮತ್ತು ದಮನಿತರ ಪರವಾಗಿ ಕೆಲಸ ಮಾಡಿದವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಇತಿಹಾಸ ಮಾತ್ರ ನೆನಪಲ್ಲಿಟ್ಟುಕೊಳ್ಳುತ್ತೆ ಎನ್ನುವ ಮಾತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ವಿಷಯದಲ್ಲಿ ಮಾತ್ರ ನಿಜ ಅಲ್ಲ, ಅದೊಂದು ಸಾರ್ವಕಾಲಿಕ ಸತ್ಯ ಎನ್ನುವುದು ಮತ್ತೆ ಮತ್ತೆ ಅನುಭವಕ್ಕೆ ಬರುತ್ತಿದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ಸ್ವತಂತ್ರ ಭಾರತದಲ್ಲಿ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ರಾಜಕೀಯ ಕ್ಷೇತ್ರದ ಕೇಂದ್ರ ಸ್ಥಾನಕ್ಕೆ ತಂದು ನಿಲ್ಲಿಸಿದ ಮೊದಲ ನಾಯಕ ಡಿ.ದೇವರಾಜ ಅರಸು. ದಮನಿತ ಜಾತಿಗಳ ಪಾಲಿಗೆ ಧಣಿ ಮತ್ತು ದನಿಯಾಗಿದ್ದ ಅರಸು ಅವರ ಪುಣ್ಯಸ್ಮರಣೆಯ ದಿನವಾದ ಇಂದು ನನ್ನ ಗೌರವಪೂರ್ವಕ ನಮನಗಳು’ ಎಂದು ಮತ್ತೊಂದು ಟ್ವೀಟ್ನಲ್ಲಿ ಸಿದ್ದರಾಮಯ್ಯ ಅರಸು ಅವರನ್ನು ಸ್ಮರಿಸಿದ್ದಾರೆ.
ಬಡವರು,ಶೋಷಿತರು ಮತ್ತು ದಮನಿತರ ಪರವಾಗಿ ಕೆಲಸ ಮಾಡಿದವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ,
— Siddaramaiah (@siddaramaiah) June 6, 2019
ಇತಿಹಾಸ ಮಾತ್ರ ನೆನಪಲ್ಲಿಟ್ಟುಕೊಳ್ಳುತ್ತೆ ಎನ್ನುವ ಮಾತು ಡಿ.ದೇವರಾಜರ ವಿಷಯದಲ್ಲಿ ಮಾತ್ರ ನಿಜ ಅಲ್ಲ,
ಅದೊಂದು ಸಾರ್ವಕಾಲಿಕ ಸತ್ಯ ಎನ್ನುವುದು ಮತ್ತೆ ಮತ್ತೆ ಅನುಭವಕ್ಕೆ ಬರುತ್ತಿದೆ.@INCKarnataka
ಸ್ವತಂತ್ರ ಭಾರತದಲ್ಲಿ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ರಾಜಕೀಯ ಕ್ಷೇತ್ರದ ಕೇಂದ್ರ ಸ್ಥಾನಕ್ಕೆ ತಂದು ನಿಲ್ಲಿಸಿದ ಮೊದಲ ನಾಯಕ ಡಿ.ದೇವರಾಜ ಅರಸು.
— Siddaramaiah (@siddaramaiah) June 6, 2019
ದಮನಿತಜಾತಿಗಳ ಪಾಲಿಗೆ ಧಣಿ ಮತ್ತು ದನಿಯಾಗಿದ್ದ ಅರಸು ಅವರ ಪುಣ್ಯಸ್ಮರಣೆಯ ದಿನವಾದ ಇಂದು ನನ್ನ ಗೌರವ ಪೂರ್ವಕ ನಮನಗಳು.@INCKarnataka pic.twitter.com/SqvCsa4ZRE