ಮುಖ್ಯಮಂತ್ರಿ ಪರಿಹಾರ ನಿಧಿಗೆ ಹರಿದು ಬಂದ ದೇಣಿಗೆ
ಬೆಂಗಳೂರು, ಆ.19: ಇಂದು ವಿವಿಧ ಸಂಘ ಸಂಸ್ಥೆಗಳು, ಗಣ್ಯವ್ಯಕ್ತಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿಗಳ ಪರಿಹಾರ ಉದಾರ ದೇಣಿಗೆ ನೀಡಿದರು.
ಮುಖ್ಯಮಂತ್ರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 25 ಕೋಟಿ ರೂ., ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ 5 ಕೋಟಿ ರೂ., ಜಯದೇವ ಹೃದ್ರೋಗ ಸಂಸ್ಥೆಯಿಂದ 28 ಲಕ್ಷ ರೂ., ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ 25 ಲಕ್ಷ ರೂ., ಶಾಸಕ ಶಾಮನೂರು ಶಿವಶಂಕರಪ್ಪ ಅವರ ವೈಯಕ್ತಿಕ ದೇಣಿಗೆ 25 ಲಕ್ಷ ರೂ. ಮತ್ತು ಬಾಪೂಜಿ ವಿದ್ಯಾಸಂಸ್ಥೆಯ ದೇಣಿಗೆ 44 ಲಕ್ಷ ರೂ, ಕೆಎಂಎಫ್ ವತಿಯಿಂದ 1 ಕೋಟಿ ರೂ., ಒಟ್ಟು 32.22 ಕೋಟಿ ರೂ ದೇಣಿಗೆ ಸ್ವೀಕರಿಸಿದರು.
ಇದಲ್ಲದೆ ರಾಜ್ಯ ಸರ್ಕಾರಿ ನಿವೃತ್ತ ನೌಕರರು ತಮ್ಮ ಒಂದು ದಿನದ ಪಿಂಚಣಿ ನೀಡುವುದಾಗಿ ಪತ್ರ ನೀಡಿದರು.