'ಕಂಬಳಿ ಕೇಳಿದರೆ, ಕರ್ಚೀಫ್ ಭಿಕ್ಷೆ ನೀಡಿದ್ದಾರೆ': ಕೇಂದ್ರ ಸರಕಾರದ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ
ಬೆಂಗಳೂರು, ಅ.6: ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರ 1200 ಕೋಟಿ ರೂಪಾಯಿ ಬಿಡುಗಡೆ ಸಂಬಂಧಪಟ್ಟಂತೆ ಹೊದ್ಕೊಳ್ಳೊಕೆ ಕಂಬಳಿ ಕೇಳಿದರೆ, ಕರ್ಚೀಫ್ ಭಿಕ್ಷೆ ನೀಡಿದ್ದಾರೆ ಎಂದು ಚಿಂತಕ, ಬಹುಭಾಷಾ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಈ ಕುರಿತು ಟ್ವಿಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಹೊದ್ಕೊಳ್ಳೊಕೆ ಕಂಬಳಿ ಕೇಳಿದರೆ, ಕರ್ಚೀಫ್ ಭಿಕ್ಷೆ ಕೊಟ್ಟು ಬೀಗುತ್ತಾ ಇದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಣ್ಣ ಮೊತ್ತದ ಪರಿಹಾರಕ್ಕೆ ಪ್ರಜೆಗಳೆ ಮರುಳಾಗದಿರಿ, ದೇಶದ ದುಡ್ಡು, ನಮ್ಮ ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ ಪ್ರಶ್ನಿಸೋದನ್ನು ನಿಲ್ಲಿಸಬೇಡಿ. ಯಾರೇ ಆದರೂ, ನಾವು ಉಗೀತಿದ್ರೇನೆ ಕೆಲಸ ಮಾಡುವುದು ಅಲ್ವಾ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಹೊದ್ಕ್ಕೊಳ್ಳೊಕೆ ಕಂಬಳೀ ಕೇಳ್ದ್ರೆ .. ಕರ್ಚೀಪ್ ಭಿಕ್ಷೆ ಕೊಟ್ಟು ಬೀಗ್ತಾ ಇದಾರೆ ಉತ್ತರಕುಮಾರರು...ಪ್ರಜೆಗಳೇ.. ಮರುಳಾಗದಿರಿ ..ದೇಶದ ದುಡ್ಡು ನಮ್ದು..ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ...ಪ್ರಶ್ನಿಸೋದನ್ನ ನಿಲ್ಲಿಸ್ಬೇಡಿ...ಯಾರೆ ಆದ್ರು ನಾವು ಉಗೀತಿದ್ರೇನೆ ಕೆಲಸ ಮಾಡೊದು ಅಲ್ವಾ?? #justasking pic.twitter.com/66XdW2sh3s
— Prakash Raj (@prakashraaj) October 6, 2019