ತೆಂಗಿನ ಮರದ ಗರಿ ತೆಗೆಯಲು ಹೋದ ವೃದ್ಧೆ ಆಯತಪ್ಪಿ ಬಿದ್ದು ಸಾವು
ಧಾರವಾಡ, ಎ.18: ಮನೆ ಮೇಲೆ ಬಿದ್ದಿದ್ದ ತೆಂಗಿನ ಮರದ ಗರಿ ತೆಗೆಯಲು ಹೋದ ವೃದ್ಧೆಯೊಬ್ಬರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ನಗರದ ಸಪ್ತಾಪುರ 8ನೇ ಕ್ರಾಸ್ನ ನಿವಾಸಿ ಸರೊಜಾ ಸಾಟೆ (65) ಮೃತಪಟ್ಟ ವೃದ್ಧೆ. ಶುಕ್ರವಾರ ರಾತ್ರಿ ನಗರಾದ್ಯಂತ ಭಾರೀ ಗಾಳಿ ಬೀಸಿದ್ದ ಪರಿಣಾಮ ಮನೆಗೆ ಹೊಂದಿಕೊಂಡಿದ್ದ ತೆಂಗಿನ ಮರದ ಗರಿಗಳು ಮನೆ ಮೇಲೆ ಬಿದ್ದಿದ್ದವು. ಇವುಗಳನ್ನು ತೆರವುಗೊಳಿಸಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದ್ದು, ಪಕ್ಕದ ಮನೆಯ ಕಾಂಪೌಂಡ್ ಗೇಟಿಗೆ ಬಡಿದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೆಯಲ್ಲಿ ಇವರೊಬ್ಬರೇ ವಾಸ ಮಾಡುತ್ತಿದ್ದು, ಮಗಳು ಮೈಸೂರಿನಲ್ಲಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story