ಶವಸಂಸ್ಕಾರಕ್ಕೆ ಹಿಂಜರಿದ ಕುಟುಂಬ: ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಸ್ಥಳೀಯ ಯುವಕರು
ತುಮಕೂರು, ಮೇ.12:: ಕೊರೋನಾದಿಂದಾಗಿ ಸೀಲ್ ಡೌನ್ ಆಗಿರುವ ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿ ವಾಸವಿದ್ದ ನಾರಾಯಣರಾವ್ (60) ಎಂಬುವವರು ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನಹೊಂದಿದ್ದಾರೆ. ಆದರೆ ಇವರ ಕುಟುಂಬಸ್ಥರು ಶವಸಂಸ್ಕಾರ ಮಾಡಲು ಹಿಂಜರಿದ ಕಾರಣ ಸ್ಥಳೀಯ ಯುವಕರು ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಸ್ಥಳೀಯ ಯುವಕರಾದ ಶಾರುಖ್, ಟಿಪ್ಪು, ಖಾಲಿದ್, ಇಮ್ರಾನ್, ಸಾದ್, ಖತೀಪ್ ಮುಂತಾದವರು ಜಿಲ್ಲಾಡಳಿತದ ಅನುಮತಿ ಪಡೆದು ಸಕಲ ಸಿದ್ಧತೆಗಳೊಂದಿಗೆ ಮೃತ ನಾರಾಯಣರಾವ್ ಅವರ ಶವಸಂಸ್ಕಾರ ಮಾಡಿದ್ದಾರೆ. ಟೈಲರ್ ವೃತ್ತಿ ಮಾಡುತ್ತಿದ್ದ ನಾರಾಯಣರಾವ್ ವಿಕಲಚೇತನರಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಮೃತರಾಗಿದ್ದರು.
ಯುವಕರು ನಾರಾಯಣರಾವ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದರೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿ ಹೃದಯವಂತಿಕೆ ಮೆರೆದಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಕುಟುಂಬಸ್ಥರು, ಸಾರ್ವಜನಿಕರು ಅಭಿನಂದನೆ ತಿಳಿಸಿದ್ದಾರೆ.
Next Story