ಕಲಬುರಗಿ: ಶಾಸಕರ ಬೆಂಬಲಿಗರಿಂದ ಜೀವಬೆದರಿಕೆ ಕರೆ; ಅಧಿಕಾರಿಯಿಂದ ದೂರು
ಕಲಬುರಗಿ, ಮೇ 29: ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಅವರ ವಿರುದ್ಧ ವರ್ಗಾವಣೆ ಬೆದರಿಕೆ ಹಾಗೂ ಕೊರೋನ ಕಿಟ್ಗೆ ನೆರವು ಕೇಳಿದ ಆರೋಪ ಮಾಡಿದ ಬಿಸಿಎಂ ಅಧಿಕಾರಿ ರಮೇಶ್ ಸಂಗಾ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸ್ ದೂರು ನೀಡಲಾಗಿದೆ.
ಶಾಸಕರ ವಿರುದ್ಧ ತಾನು ಮಾಡಿರುವ ಆರೋಪಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡ ಬಳಿಕ ತನಗೆ ಶಾಸಕರ ಬೆಂಬಲಿಗರು ಎಂದು ಹೇಳಿಕೊಂಡು ಕೆಲವರು ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಗಾ ಗುಲ್ಬರ್ಗ ವಿವಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story