ಕೋವಿಡ್ ನಿಂದ ಮೃತಪಟ್ಟ ಬಿಜೆಪಿ ಮುಖಂಡನ ಅಂತ್ಯಸಂಸ್ಕಾರ ನೆರವೇರಿಸಿದ ಪಿಎಫ್ಐ ಕಾರ್ಯಕರ್ತರು
ಗಂಗಾವತಿ, ಆ.3: ಕೊರೋನ ಸೋಂಕಿನಿಂದ ಮೃತಪಟ್ಟ ಬಿಜೆಪಿ ಮುಖಂಡರೊಬ್ಬರ ಅಂತ್ಯಸಂಸ್ಕಾರವನ್ನು ಪಾಫ್ಯುಲರ್ ಫ್ರಂಟ್ ಅಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರು ನೆರವೇರಿಸಿದ್ದಾರೆ.
ನಗರದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದರು. ಅವರ ಅಂತಿಮ ಕ್ರಿಯೆಯನ್ನು ಪಿಎಫ್ಐ ಸದಸ್ಯರು ನೆರವೇರಿಸಿದ್ದು, ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಿಎಫ್ಐ ಸದಸ್ಯರು ಮೃತ ವ್ಯಕ್ತಿಯ ಕುಟುಂಬದ ಅನುಮತಿ ಪಡೆದು, ಜಿಲ್ಲಾಡಳಿತದ ಸೂಚನೆ ಮೆರೆಗೆ ಕೋವಿಡ್ ವಿಧಾನ ಅನುಸರಿಸಿ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.
Next Story