ಲೇಖಕಿ ಸುಮ ಚಂದ್ರಶೇಖರ್ ಗೆ ಕಸಾಪ ದತ್ತಿ ಪ್ರಶಸ್ತಿ
ಬೆಂಗಳೂರು, ಸೆ.30: ಕನ್ನಡ ಸಾಹಿತ್ಯ ಪರಿಷತ್ ನೀಡುವ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿಗೆ ಯುವಲೇಖಕಿ ಸುಮ ಚಂದ್ರಶೇಖರ್ ರಚಿಸಿರುವ ‘ಸತ್ಯಪಥದ ನಿತ್ಯಸಂತ’ ಕೃತಿ ಆಯ್ಕೆಯಾಗಿದೆ.
ಸದರಿ ಕೃತಿಯು ಮಹಾತ್ಮ ಗಾಂಧೀಜಿ 150ನೇ ಜಯಂತಿ ವರ್ಷಾಚರಣೆಯ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರಿಗೆ ಪ್ರೋತ್ಸಾಹಧನ ಯೋಜನೆಯಡಿಯಲ್ಲಿ ಪ್ರಕಟವಾಗಿದ್ದು, 18 ಅಧ್ಯಾಯಗಳಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ-ಸಂದೇಶಗಳ ಕುರಿತು ರಚಿಸಿರುವ ಲೇಖನಗಳ ಸಂಗ್ರಹವಾಗಿದೆ. ಇವರು ಗಾಂಧಿ ಸ್ಮೃತಿ ಪುರಸ್ಕಾರ ಮತ್ತು ಕನ್ನಡ ಮಾಣಿಕ್ಯರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Next Story