6 ಡಿವೈಎಸ್ಪಿಗಳ ವರ್ಗಾವಣೆ
ಬೆಂಗಳೂರು, ಅ.9: ಪೊಲೀಸ್ ಇಲಾಖೆಯ 6 ಡಿವೈಎಸ್ಪಿಗಳನ್ನ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಶರಣಪ್ಪ ಅವರನ್ನು ಸಂಚಾರ ಉಪವಿಭಾಗ ಬೆಳಗಾವಿ ನಗರಕ್ಕೆ, ಎನ್. ನವೀನ್ ಕುಮಾರ್-ನಾಗಮಂಗಲ ಉಪ ವಿಭಾಗ ಮಂಡ್ಯ, ಕೆ. ಕೃಷ್ಣಮೂರ್ತಿ-ಭದ್ರಾವತಿ ಉಪವಿಭಾಗ ಶಿವಮೊಗ್ಗ, ಮಹಾಂತೇಶ್ವರ ಎಸ್. ಜಿದ್ದಿ-ಎಸಿಬಿ. ಕೆ.ಬಿ.ವಿಶ್ವನಾಥ್-ಕರ್ನಾಟಕ ಪೊಲೀಸ್ ಅಕಾಡೆಮಿ(ಮೈಸೂರು), ಸುಧಾಕರ್ ಸದಾನಂದ ನಾಯಕ್ ಅವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯಕ್ಕೆ ಸೇರುವಂತೆ ಆದೇಶ ನೀಡಲಾಗಿದೆ.
ವರ್ಗಾವಣೆಗೊಂಡ ಸಿಬ್ಬಂದಿ ತಕ್ಷಣದಿಂದಲೇ ನಿಗದಿತ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story