ದರೋಡೆಗೆ ಹೊಂಚು: ನಾಲ್ವರು ಅಂತರರಾಜ್ಯ ಕಳವು ಆರೋಪಿಗಳು ಸೆರೆ
ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ
ಶಿವಮೊಗ್ಗ : ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪದಲ್ಲಿ ನಾಲ್ಕು ಮಂದಿಯನ್ನು ಬಂಧಿಸಿ, ಅವರಿಂದ 1 ಪಿಸ್ತೂಲ್, 4 ಗುಂಡುಗಳು,1 ಚಾಕು, 4 ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ದೊಡ್ಡಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಮೂರೆನ್ ಜಿಲ್ಲೆಯ ಸುರೇಶ್ ಸಿಂಗ್ (20), ಬೆಂಡ್ ಜಿಲ್ಲೆಯ ಕಮಲ್ ಸಿಂಗ್ (34), ರಾಜಸ್ತಾನದ ಜಾಲೂರು ಜಿಲ್ಲೆಯ ರಣವೀರ್ ಸಿಂಗ್ ( 34), ಶಿರೋಯಿ ಜಿಲ್ಲೆಯ ರಾಮಲಾಲ್ (21) ಬಂಧಿತರು.
ದೊಡ್ಡಪೇಟೆ ಠಾಣೆ ವ್ಯಾಪ್ತಿಯ ಗಾಂಧಿಬಝಾರ್ ಸಮೀಪ ದರೋಡೆ ಮಾಡಲು ಸಜ್ಜಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ವೃತ್ತ ನಿರೀಕ್ಷಕ ವಸಂತ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಮಂಜಮ್ಮ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ನಡೆಸಿ ನಾಲ್ವರು ಅರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story