ದೇವಸ್ಥಾನದಲ್ಲಿ ಕಳವು : ಇಬ್ಬರು ಆರೋಪಿಗಳು ಸೆರೆ
ಶಿವಮೊಗ್ಗ : ಶಿವಮೊಗ್ಗದ ಆರ್.ಎಂ.ಎಲ್ ನಗರದಲ್ಲಿ ಶನಿಮಹಾತ್ಮ ದೇವಸ್ಥಾನದಲ್ಲಿ ಕಳವು ನಡೆಸಿದ ಆರೋಪದಲ್ಲಿ ಇಬ್ಬರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬುದ್ಧನಗರದ ವಸೀಮ್ ಅಕ್ರಂ (19), ರಾಗಿಗುಡ್ಡ ನಿವಾಸಿ ಕರೀಂ (19) ಬಂಧಿತರು.
ದೇವಸ್ಥಾನದ ಶಟರ್ ಮುರಿದು 15 ಸಾವಿರ ರೂ. ಕಾಣಿಕೆ ಹಣ, ಗರ್ಭಗುಡಿಯ ಬೀರುವಿನಲ್ಲಿದ್ದ 5 ಸಾವಿರ ಮೌಲ್ಯದ ಬೆಳ್ಳಿಯ ಸಾಮಗ್ರಿ ಕಳವು ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story