ರಾಯಚೂರು ಲ್ಯಾಬೋರೇಟರಿ ಕಂಪನಿಯಲ್ಲಿ ಕೆಮಿಕಲ್ ಲೀಕ್: ಓರ್ವ ಮೃತ್ಯು, ನಾಲ್ವರು ಅಸ್ವಸ್ಥ
ರಾಯಚೂರು, ಅ.21: ತಾಲೂಕಿನ ವಡಲ್ಲೂರು ಗ್ರಾಮದ ಬಳಿ ಇರುವ ರಾಯಚೂರು ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಿಪಿಪಿ ಎಂಬ ಕೆಮಿಕಲ್ ಲೀಕ್ ಆಗಿರುವ ಪರಿಣಾಮ, ಓರ್ವ ಮೃತಪಟ್ಟಿದ್ದು, ನಾಲ್ವರು ಅಸ್ವಸ್ಥರಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕೆಮಿಕಲ್ ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಘಟನೆಯಲ್ಲಿ ನೆರೆ ರಾಜ್ಯದ ಲಿಂಗಮಪಲ್ಲಿ ಮೂಲದ ಲಕ್ಷ್ಮಣ(28) ಮೃತಪಟ್ಟಿದ್ದು, ಇಂದಪೂರಿನ ಅರವಿಂದ(24) ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ದೇವಸೂಗೂರಿನ ಅನಿಲ(25) ಹಾಗೂ ಚಿಕ್ಕಸೂಗೂರಿನ ಮಾರುಫ್(22) ಇಬ್ಬರೂ ನಿನ್ನೆ ರಾತ್ರಿ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಲ್ಯಾಬೋರೇಟರಿಯಲ್ಲಿ ಸಿಪಿಪಿ ಎಂಬ ಕೆಮಿಕಲ್ ಲೋಡ್ ಮಾಡುವ ವೇಳೆ ಕೆಮಿಕಲ್ ಲೀಕ್ ಆಗಿ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾ ಗುತ್ತಿದೆ. ಈ ಘಟನೆ ರಾಯಚೂರು ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ನಡೆದಿದ್ದು, ಇದೂವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.