ಮಗುವನ್ನು ಎತ್ತಿಕೊಂಡು ಅಗ್ನಿಕುಂಡ ದಾಟಿದ ಸ್ವಾಮೀಜಿ: ವ್ಯಾಪಕ ಆಕ್ರೋಶ
ಹಾವೇರಿ, ಅ.27: ಸ್ವಾಮೀಜಿಯೊಬ್ಬರು ಒಂದೇ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಅಗ್ನಿಕುಂಡ ದಾಟಿರುವ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ.
ಬುಳ್ಳಾಪುರ ಗ್ರಾಮದಲ್ಲಿ ದಸರಾ ಮಹೋತ್ಸದಂದು ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಸ್ವಾಮೀಜಿ ದಾವಣಗೆರೆ ಮೂಲದ ಭಕ್ತರೊಬ್ಬರ ಗಂಡು ಮಗುವನ್ನು ಹರಕೆ ಹೆಸರಲ್ಲಿ ಎತ್ತಕೊಂಡು ಅಗ್ನಿಕುಂಡ ದಾಟಿದ್ದಾರೆ ಎಂದು ತಿಳಿದುಬಂದಿದೆ.
ಬೆಂಕಿಯ ಮೇಲೆ ಅಪಾಯಕಾರಿಯಾಗಿ ಒಂದೇ ಕೈಯಲ್ಲಿ ಮಗುವನ್ನು ಎತ್ತಿಕೊಂಡಿರುವದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ವೇಳೆ ಕೈ ಜಾರಿದರೆ ಮಗುವಿನ ರಕ್ಷಣೆ ಯಾರ ಹೊಣೆ? ಎಂಬ ಪ್ರಶ್ನೆಗಳು ಮೂಡಿವೆ. ಈ ರೀತಿ ಮಗುವನ್ನು ಹೊತ್ತೊಯ್ದಿದ್ದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Next Story