ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ ಪಟ್ಟಿ ಬಿಡುಗಡೆ
ಬೆಂಗಳೂರು, ನ.21: ಕರ್ನಾಟಕ ಲೇಖಕಿಯರ ಸಂಘವು 2019ನೇ ಸಾಲಿನ ವಾರ್ಷಿಕ ದತ್ತಿ ಪ್ರಶಸ್ತಿ ಮತ್ತು ಬಹುಮಾನಕ್ಕೆ ಭಾಜನರಾದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪುಸ್ತಕ ಪ್ರಶಸ್ತಿಗೆ ಡಾ. ಬಿ.ಎಸ್ ಶೈಲಜಾ (ವಿಜ್ಞಾನ ಸಾಹಿತ್ಯ), ಸುಮವೀಣಾ (ಪ್ರಬಂಧ ಸಂಕಲನ) ಭಾಜನರಾಗಿದ್ದು, ವಿಶಿಷ್ಟ ಲೇಖಕಿ ಪ್ರಶಸ್ತಿಗೆ ಶರೀಫಾ ಬಿ. ಚಿತ್ರದುರ್ಗ, ಜ್ಯೋತಿ ಬಾದಾಮಿ, ಪದ್ಮಾವತಿ ಚಂದ್ರು, ಡಾ. ಎಸ್.ಜಿ ಮಾಲತಿ ಶೆಟ್ಟಿ ಹಾಗೂ ಡಾ. ಗೀತಾ ಪ್ರಸಾದ್ ಅವರು ಭಾಜನರಾಗಿದ್ದಾರೆ.
ನಾಗರೇಖಾ ಗಾಂವಕರ, ಸವಿತಾ ಶ್ರೀನಿವಾಸ್, ಜಯಶ್ರೀ ದೇಶಪಾಂಡೆ, ಊರ್ಮಿಳಾ ರಾವ್, ಡಾ. ಸುಲತ, ವಿಶಾಲಾ ಆರಾಧ್ಯ, ಕೃಷ್ಣಾಬಾಯಿ ಹಾಗಲವಾಡಿ, ಮಂದಾಕಿನಿ ಪುರೋಹಿತ, ಡಾ. ಇಂದಿರಾ ಹೆಗಡೆ, ಅನಿತಾ ಸಿಕ್ವೇರಿ, ಮಾನಸ ಕೆ.ಕೆ, ಕುಶಾಲ ಸ್ವಾಮಿ, ರಾಜಶ್ರೀ ಶೆಟ್ಟಿ ಹಾಗೂ ಶಶಿರೇಖಾ ಜೆ.ಕೆ ಅವರು ದತ್ತಿನಿಧಿ ಬಹುಮಾನಗಳಿಗೆ ಭಾಜನರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story