ಸೊರಬ: ಕಾರು ಅಡ್ಡಗಟ್ಟಿ ಉದ್ಯಮಿಯಿಂದ ಲಕ್ಷಾಂತರ ರೂ. ದೋಚಿದ ತಂಡ
ಶಿವಮೊಗ್ಗ, ನ.26: ಮುಂಬೈನಿಂದ ಸಾಗರಕ್ಕೆ ಬರುತ್ತಿದ್ದ ಉದ್ಯಮಿಯೊಬ್ಬರ ಕಾರು ತಡೆದು ಲಕ್ಷಾಂತರ ರೂ. ದೋಚಿರುವ ಪ್ರಕರಣ ವರದಿಯಾಗಿದೆ.
ಸಾಗರದ ಉದ್ಯಮಿಯೊಬ್ಬರು ಮುಂಬೈನಿಂದ ಕಾರಿನಲ್ಲಿ ಹಣ ತೆಗೆದುಕೊಂಡು ಬರುತ್ತಿದ್ದರು. ಸೊರಬದ ತಾಲೂಕಿನ ತವನಂದಿ ಗ್ರಾಮದ ಬಳಿ ಗುಂಪೊಂದು ಕಾರನ್ನು ಅಡ್ಡಗಟ್ಟಿ ಕಾರು ಚಾಲಕ ಮತ್ತು ಜೊತೆಗಿದ್ದ ಮತ್ತೊಬ್ಬನಿಗೆ ಥಳಿಸಿ ಕಾರಿನಲ್ಲಿದ್ದ ಲಕ್ಷಾಂತರ ರೂ. ಹಣವನ್ನು ದೋಚಿ ಪರಾರಿಯಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
Next Story