ಕಚೇರಿಯಲ್ಲೇ ಸಹೋದ್ಯೋಗಿಗೆ ಮುತ್ತು ಕೊಟ್ಟಿದ್ದ ಆರೋಪ: ತಹಶೀಲ್ದಾರ್ ಅಮಾನತು
ಕೊಪ್ಪಳ, ನ.28: ಕಚೇರಿಯಲ್ಲೇ ಮಹಿಳಾ ಸಹೋದ್ಯೋಗಿಗೆ ಮುತ್ತು ಕೊಟ್ಟಿದ್ದ ಆರೋಪದ ಮೇಲೆ ಕುಷ್ಟಗಿ ತಾಲೂಕಿನ ತಹಶೀಲ್ದಾರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಸಹೋದ್ಯೋಗಿ ಮಹಿಳೆಗೆ ಮುತ್ತು ಕೊಟ್ಟಿದ್ದ ಕುಷ್ಟಗಿ ತಹಶೀಲ್ದಾರ್ ಗುರು ಬಸವರಾಜ್ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಇನ್ನು, ಘಟನೆಯ ಸಿಸಿ ಟಿವಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ತದನಂತರ, ಬಸವರಾಜ್ ಕುಷ್ಟಗಿಯಿಂದ ವರ್ಗಾವಣೆಗೊಂಡಿದ್ದರು. ಕೊಪ್ಪಳದ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಇದೀಗ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
Next Story