ಕೋಲಾರ: ನೂತನ ಕೃಷಿ ಕಾಯ್ದೆ ವಿರೋಧಿಸಿ 'ಭಾರತ್ ಬಂದ್'ಗೆ ಬೆಂಬಲ
ಕೋಲಾರ : ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಕೋಲಾರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಈ ಹಿನ್ನೆಲೆ ಕೋಲಾರದಲ್ಲಿ ರಸ್ತೆಗಳಿದು ಹೋರಾಟಕ್ಕೆ ಮುಂದಾಗಿರುವ ವಿವಿಧ ಸಂಘಟನೆಗಳ ಮುಖಂಡರು, ನಗರದ ಹೊಸ ಬಸ್ ನಿಲ್ದಾಣದಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ಬೆಂಕಿ ಹಾಕಿ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿ ಬಂದ್ ಬೆಂಬಲ ಸೂಚಿಸಿದರು. ಒಂದೆಡೆ ಗ್ಯಾಸ್ ಸ್ಟೌ ಇಟ್ಟು ರಸ್ತೆಯಲ್ಲೆ ಟೀ ಮಾಡಿ ಆಕ್ರೋಶ ಹೊರ ಹಾಕಿದರೆ, ಜೋಳ ಹಾಗೂ ಕಡಲೆ ಕಾಯಿ ಬೇಯಿಸಿ ಹಂಚುವ ಮೂಲಕ ಕಾಯ್ದೆಗೆ ವಿರೋಧ ಮಾಡಿದರು ಹಾಗೂ ದೆಹಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ರಸ್ತೆಯಲ್ಲೇ ಅಡುಗೆ ಮಾಡಿ ಆಕ್ರೋಶ ಹೊರ ಹಾಕಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.