ಮಾಧ್ಯಮಗಳ ಎದುರು ಅಸಮಾಧಾನ ಹೊರ ಹಾಕಬೇಡಿ: ಸಚಿವರಿಗೆ ಯಡಿಯೂರಪ್ಪ ಮನವಿ
ಬೆಂಗಳೂರು, ಜ.21: ಖಾತೆ ಬದಲಾವಣೆಗಳ ಬಗ್ಗೆ ಯಾರು ಮಾಧ್ಯಮಗಳ ಮುಂದೆ ಅಸಮಾಧಾನ ಹೊರ ಹಾಕಬೇಡಿ. ಸ್ವಲ್ಪ ದಿನ ಎಲ್ಲರೂ ಸಮಾಧಾನದಿಂದ ಕಾಯಿರಿ. ಖಾತೆಗಳನ್ನ ಬದಲಾವಣೆ ಮಾಡಿಕೊಡುವ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ತಮ್ಮ ಕಚೇರಿಗೆ ಹೋದ ಮುಖ್ಯಮಂತ್ರಿ, ನೂತನ ಸಚಿವ ಅರವಿಂದ ಲಿಂಬಾವಳಿ ಜೊತೆ ಕೆಲ ಕಾಲ ಚರ್ಚೆ ಮಾಡಿದರು. ಈ ವೇಳೆ ತನಗೆ ನೀಡಿರುವ ಅರಣ್ಯ ಖಾತೆಯ ಜೊತೆ ಪರಿಸರ ಖಾತೆಯನ್ನು ನೀಡಿ, ಇಲ್ಲದಿದ್ದರೆ ಅರಣ್ಯ ಖಾತೆಯನ್ನು ಬದಲಾಯಿಸುವಂತೆ ಅರವಿಂದ ಲಿಂಬಾವಳಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಆರ್.ಅಶೋಕ್, ಬೈರತಿ ಬಸವರಾಜ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್ ಉಪಸ್ಥಿತರಿದ್ದರು.
Next Story