ಬರೀ ಜಿಲೆಟಿನ್ ಕಡ್ಡಿಯಿಂದ ಇಷ್ಟೊಂದು ಪ್ರಮಾಣದ ಸ್ಫೋಟ ಸಾಧ್ಯವೇ ಇಲ್ಲ: ಸಚಿವ ಈಶ್ವರಪ್ಪ
“ತಜ್ಞರ ತಂಡದ ಪರಿಶೀಲನಾ ವರದಿಯ ಬಳಿಕ ಮುಂದಿನ ಕ್ರಮ”
ಸ್ಫೋಟ ಸಂಭವಿಸಿದ ಸ್ಥಳ
ಶಿವಮೊಗ್ಗ, ಜ.22: ಬರೀ ಜಿಲೆಟಿನ್ ಕಡ್ಡಿಯಿಂದ ಇಷ್ಟೊಂದು ಪ್ರಮಾಣದಲ್ಲಿ ಸ್ಫೋಟವಾಗಲು ಸಾಧ್ಯವೇ ಇಲ್ಲ. ಆದ್ದರಿಂದ ತಜ್ಞರ ತಂಡು ಬಂದ ಪರಿಶೀಲನೆ ನಡೆಸಿ, ವರದಿ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹುಣಸೋಡು ಸ್ಫೋಟ ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಈ ಹಿಂದೆ ಹಲವಾರು ಭಾರಿ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಈಗ ಪ್ರಶ್ನೆ ಇರುವುದು ಅಕ್ರಮವೋ, ಸಕ್ರಮವೋ ಅನ್ನುವುದಲ್ಲ. ಇಷ್ಟೊಂದು ಅಗಾಧ ಪ್ರಮಾಣದ ಸ್ಫೋಟಕ್ಕೆ ಕಾರಣವೇನು? ಬರಿ ಜಿಲೆಟಿಕ್ ಕಡ್ಡಿಯಿಂದ ಇಷ್ಟೊಂದು ಪ್ರಮಾಣದಲ್ಲಿ ಸ್ಫೋಟ ಸಂಭವಿಸಲು ಸಾಧ್ಯವಿದೆಯೇ? ಅಥವಾ ಬೇರೆ ಏನಾದರೂ ಇತ್ತೇ ಅನ್ನುವ ಕುರಿತು ಪರಿಶೀಲನೆ ನಡೆಯಬೇಕಿದೆ. ತಜ್ಞರ ತಂಡು ಬಂದ ಪರಿಶೀಲನೆ ನಡೆಸಿ, ವರದಿ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗವುದು ಎಂದರು.
ಇಂತಹ ಘಟನೆಯನ್ನು ನಾನೆಂದು ಕಂಡು, ಕೇಳಿಲ್ಲ. ನಮ್ಮನೆಯಲ್ಲೂ ಕಿಟಕಿ, ಬಾಗಿಲು ನಲುಗಿ ಹೋಗಿವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.