ಮುಖ್ಯಪೇದೆ ಉಸ್ಮಾನ್ ಸಾಬ್ ಸೇರಿ ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ
ಬೆಂಗಳೂರು, ಜ.25: ಗಣರಾಜ್ಯೋತ್ಸವದ ಅಂಗವಾಗಿ ಪ್ರದಾನಿಸಲಾಗುವ ರಾಷ್ಟ್ರಪತಿ ಅವರ ಪ್ರಶಂಸನೀಯ ಸೇವಾ ಪದಕಕ್ಕೆ ಪೊಲೀಸ್ ಇಲಾಖೆಯ ಮುಖ್ಯಪೇದೆ ಉಸ್ಮಾನ್ ಸಾಬ್ ಸೇರಿದಂತೆ ರಾಜ್ಯದ 19 ಪೊಲೀಸರು ಪಾತ್ರರಾಗಿದ್ದಾರೆ.
ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಸೇವೆಗಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರಪತಿ ಪದಕಕ್ಕೆ ತಿಪಟೂರಿನ ನಗರ ಪೊಲೀಸ್ ಠಾಣೆಯ ಮುಖ್ಯಪೇದೆ ಉಸ್ಮಾನ್ ಸಾಬ್ ಅವರು ಭಾಜನರಾಗಿರುವುದು ಮತ್ತೊಂದು ವಿಶೇಷ.
2012ನೇ ಸಾಲಿನಲ್ಲಿಯೇ ಮುಖ್ಯಮಂತ್ರಿ ಪದಕ ತಮ್ಮದಾಗಿಸಿಕೊಂಡಿರುವ ಉಸ್ಮಾನ್ ಸಾಬ್, 1996ರಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಗೆ ಭಡ್ತಿಯಾಗಿದ್ದರು. ಬಳಿಕ ಪೊಲೀಸ್ ತರಬೇತಿ ಪೂರೈಸಿ ಮೊದಲ ಬಾರಿಗೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು. ನಂತರ, ವಿವಿಧ ಪೊಲೀಸ್ ಠಾಣೆಗಳಲ್ಲಿ ಪೇದೆ, ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸರಗಳ್ಳತನ, ದರೋಡೆ, ಕೊಲೆ ಸೇರಿದಂತೆ ಇನ್ನಿತರೆ ಗಂಭೀರ ಪ್ರಕರಣಗಳನ್ನು ಭೇದಿಸಿರುವ ತನಿಖಾ ತಂಡದಲ್ಲಿ ಉಸ್ಮಾನ್ ಸಾಬ್ ಪ್ರಮುಖ ಪಾತ್ರವಹಿಸಿದ್ದರು. ಸತತ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪೊಲೀಸ್ ಮೆಡಲ್ ಪುರಸ್ಕಾರ ಪಡೆದ ಅಧಿಕಾರಿಗಳು
* ಡಾ. ಸುಬ್ರಮಣ್ಯರಾವ್ ಅಯ್ಯಂಕಿ(ಗುಪ್ತಚರ ದಳದ ಐಜಿಪಿ)
* ಬಿ.ಎಸ್.ನ್ಯಾಮೇಗೌಡ (ಎಸಿಬಿ, ಬೆಳಗಾವಿ, ಎಸ್ಪಿ)
* ಬಿ.ರಾಮಚಂದ್ರ(ಡಿವೈಎಸ್ಪಿ, ಸಿಐಡಿ)
* ಅಶೋಕ ಡಿ. (ಡಿವೈಎಸ್ಪಿ, ಬೆಂಗಳೂರು ರೈಲ್ವೆ ವಿಭಾಗ)
* ಸಿ.ಬಾಲಕೃಷ್ಣ(ಡಿವೈಎಸ್ಪಿ, ಬಿಡಿಎ ಸ್ಪೆಶಲ್ ಟಾಸ್ಕ್ ಫೋರ್ಸ್)
* ವಾಸುದೇವ್ ವಿಕೆ(ಡಿವೈಎಸ್ಪಿ, ಕರ್ನಾಟಕ ರಾಜ್ಯ ಪೊಲೀಸ್ ಅಪರಾಧ ವಿಭಾಗ)
* ಬಿ.ಪುಟ್ಟಸ್ವಾಮಿ(ಇನ್ಸ್ಪೆಕ್ಟರ್, ಮಹಿಳಾ ಪೊಲೀಸ್ ಠಾಣೆ, ಚಾಮರಾಜನಗರ ನಗರ)
* ಬಾಲಚಂದ್ರ ನಾಯ್ಕ್(ಚಿತ್ರದುರ್ಗ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್)
* ಪ್ರಕಾಶ್(ಉಡುಪಿ ಡಿಸಿಆರ್ಬಿ ಸಹಾಯಕ ಸಬ್ಇನ್ಸ್ಪೆಕ್ಟರ್)
* ಎಚ್.ಈಶ್ವರಯ್ಯ(ಗುಪ್ತಚರದಳ ಸಹಾಯಕ ಸಬ್ಇನ್ಸ್ಪೆಕ್ಟರ್)
* ಎಂ.ವೆಂಕಟೇಶ್ (ಕೆಎಸ್ಆರ್ಪಿ ಬೆಂಗಳೂರು, ವಿಶೇಷ ಸಹಾಯಕ ಸಬ್ಇನ್ಸ್ಪೆಕ್ಟರ್)
* ಮೋಹನ್ರಾಜು ಕೆ.(ಕೆಎಸ್ಆರ್ಪಿ ಬೆಂಗಳೂರು, ವಿಶೇಷ ಸಹಾಯಕ ಸಬ್ಇನ್ಸ್ಪೆಕ್ಟರ್)
* ಸಿ.ವೆಂಕಟಸ್ವಾಮಿ (ಕೆಎಸ್ಆರ್ಪಿ ಬೆಂಗಳೂರು, ವಿಶೇಷ ಸಹಾಯಕ ಸಬ್ಇನ್ಸ್ಪೆಕ್ಟರ್)
* ಶಶಿಕುಮಾರ್(ಗುಪ್ತಚರ ದಳ, ಸಹಾಯಕ ಸಬ್ಇನ್ಸ್ಪೆಕ್ಟರ್)
* ಜೀತೇಂದ್ರ ಕುಡುಕಡಿ ರಾಧಾಕೃಷ್ಣರೈ(ಡಿಕೆಆರ್ ಕೊಡಗು, ಸಹಾಯಕ ಸಬ್ಇನ್ಸ್ಪೆಕ್ಟರ್)
* ರಾಮಚಂದ್ರ ಲೋಕೇಶ್(ಮೈಸೂರು ಡಿಎಆರ್ ಹೆಡ್ಕಾನ್ಸ್ಟೇಬಲ್)
* ಉಸ್ಮಾನ್ ಸಾಬ್(ತಿಪಟೂರು ನಗರ ಪೊಲೀಸ್ ಠಾಣೆ ಹೆಡ್ಕಾನ್ಸ್ಟೇಬಲ್)
* ಸತೀಶ್ ಕೆಂಪಯ್ಯ ವೆಂಕಟಪ್ಪ(ಸಿಐಡಿ ಹೆಡ್ಕಾನ್ಸ್ಟೇಬಲ್)
* ಪ್ರಕಾಶ್ ಶೆಟ್ಟಿ(ಕೆಎಸ್ಆರ್ಪಿ ಹೆಡ್ಕಾನ್ಸ್ಟೇಬಲ್)