ಜಮೀನು ವಿವಾದ: ದಂಪತಿ ಮೇಲೆ ಮಾರಣಾಂತಿಕ ಹಲ್ಲೆ; ಆರೋಪ
ಚಿಕ್ಕಮಗಳೂರು: ಜಮೀನು ವಿವಾದ ಸಂಬಂಧ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ತಾಲೂಕಿನ ಬಿಗ್ಗನಹಳ್ಳಿಯಲ್ಲಿ ಬುಧವಾರ ನಡೆದಿದೆ. ಜಮೀನು ಮಾಲಕರಾದ ಮಂಜುನಾಥ್ ಮತ್ತು ಕಾವ್ಯಾ ದಂಪತಿ ಹಲ್ಲೆಗೊಳಗಾಗಿದ್ದು ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೋಟದ ಬೇಲಿ ಸಂಬಂಧ ವಿವಾದ ನಡೆದಿದ್ದು, ಗುರುವಾರ ಏಕಾಏಕಿ ಬಂದ ಚೇತನ್, ಸಚಿನ್, ಗೋಪಾಲ್ ಸೇರಿದಂತೆ 6 ಜನರ ತಂಡ ತೋಟಕ್ಕೆ ಹಾಕಲಾಗಿದ್ದ ಬೆಲಿಯನ್ನು ಕಿತ್ತು ಹಾಕಿದ್ದಾರೆ. ಮಂಜುನಾಥ್ ಮತ್ತು ಕಾವ್ಯ ದಂಪತಿ ಬೇಲಿ ಕಿತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಈ ತಂಡ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಚೇತನ್, ಸಚಿನ್, ಗೋಪಾಲ್ ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Next Story