ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಲಂಚ ಮತ್ತು ಮಂಚ: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು, ಮಾ.13: ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ. ಒಂದು ಲಂಚ, ಮತ್ತೊಂದು ಮಂಚ. ಸಿಡಿ ನಿಜಕ್ಕೂ ನಕಲಿಯೇ ಆಗಿದ್ದರೆ ರಮೇಶ್ ಜಾರಕಿಹೊಳಿಯವರು ದೂರು ನೀಡಲು ಮೀನಾಮೇಷ ಎಣಿಸುತ್ತಿರುವುದೇಕೆ? ಖಾಸಗಿ ಏಜೆನ್ಸಿಗಳ ಮೊರೆ ಹೋಗುವುದೇಕೆ? ಸರಕಾರಿ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವೇ ಅಥವಾ ಬಿಜೆಪಿ/ಬಿಜೆಪಿ ತಿಕ್ಕಾಟದಲ್ಲಿ ತಾವೇ ಬಲಿಯಾಗುವ ಭಯವೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.
''ಸ್ವತಃ ಬಿಜೆಪಿಯ ದಲಿತ ಮಹಿಳೆ ಚಾಂದಿನಿ ನಾಯ್ಕ ಮೇಲಿನ ಬಿಜೆಪಿ ಶಾಸಕ ಸಿದ್ದು ಸವದಿ ಹಲ್ಲೆ ನಡೆಸಿ ಗರ್ಭಪಾತವಾದರೂ ಕ್ರಮ ಕೈಗೊಳ್ಳದ ಸರ್ಕಾರ. ದಲಿತ ಮಹಿಳೆಯ ಪರ ನಿಲ್ಲದ ಬಿಜೆಪಿ. ಬಿಜೆಪಿ ದಲಿತ, ಹಿಂದುಳಿದವರ ವಿರೋಧಿ ಎನ್ನುವುದನ್ನ 16 ನಿಗಮಗಳಿಗೆ ಕೇವಲ 500 ಕೋಟಿ ನೀಡಿ ಬಜೆಟ್ನಲ್ಲಿಯೇ ಸಾಬೀತುಪಡಿಸಿದೆ''
''ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಒಬ್ಬ ದಲಿತ ಶಾಸಕರಿಗೇ ನಿಮ್ಮ ಆಡಳಿತದಲ್ಲಿ ರಕ್ಷಣೆ ನೀಡಲಾಗಿಲ್ಲ, ಇನ್ನು ಸಾಮಾನ್ಯರ ಗತಿ ಏನು? ಕೆಜಿ ಹಳ್ಳಿ ಪ್ರಕರಣದಲ್ಲಿ ಪೊಲೀಸ್ ಠಾಣೆಯನ್ನೇ ಉಳಿಸಿಕೊಳ್ಳಲಾಗದಷ್ಟು ಕಳಪೆಯಾಗಿದೆ #BuildupBommai ಅವರ ಕೈಲಿರುವ ಗೃಹ ಇಲಾಖೆ'' ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ.
— Karnataka Congress (@INCKarnataka) March 13, 2021
ಒಂದು ಲಂಚ
ಮತ್ತೊಂದು ಮಂಚ!
ಸಿಡಿ ನಿಜಕ್ಕೂ ನಕಲಿಯೇ ಆಗಿದ್ದರೆ ರಮೇಶ್ ಜಾರಕಿಹೊಳಿಯವರು ದೂರು ನೀಡಲು ಮಿನಾಮೇಷ ಎಣಿಸುತ್ತಿರುವುದೇಕೆ?
ಖಾಸಗಿ ಏಜೆನ್ಸಿಗಳ ಮೊರೆ ಹೋಗುವುದೇಕೆ?
ಸರ್ಕಾರಿ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವೇ ಅಥವಾ #BJPvsBJP ತಿಕ್ಕಾಟದಲ್ಲಿ ತಾವೇ ಬಲಿಯಾಗುವ ಭಯವೇ? pic.twitter.com/u6XMGAoXZm