ದರ್ಶನ್ ನಟನೆಯ ರಾಬರ್ಟ್ ಚಿತ್ರ ಪೈರಸಿ ಯತ್ನ ಆರೋಪ: ಯುವಕನ ಬಂಧನ
ಬೆಂಗಳೂರು, ಮಾ.13: ಇತ್ತೀಚಿಗೆ ಬಿಡುಗಡೆಗೊಂಡಿರುವ ದರ್ಶನ್ ನಟನೆಯ ರಾಬರ್ಟ್ ಚಿತ್ರವನ್ನು ಪೈರಸಿ ಮಾಡಲು ಯತ್ನಿಸಿದ ಆರೋಪದಡಿ ಯುವಕನೋರ್ವನನ್ನು ಇಲ್ಲಿನ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಧು ಎಂಬಾತ ಬಂಧಿತ ಆರೋಪಿಯಾಗಿದ್ದು, ಸಿದ್ಧೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ಸೆರೆ ಹಿಡಿಯುವಾಗ ಸಿಕ್ಕಿಬಿದಿದ್ದಾನೆ ಎಂದು ತಿಳಿದುಬಂದಿದೆ.
ಸತತ ಮೂರು ದಿನಗಳಿಂದ ಥಿಯೇಟರ್ ಗೆ ಬರುತ್ತಿದ್ದ ಈತನನ್ನು ಗಮನಿಸಿರುವ ಚಿತ್ರಮಂದಿರದ ಮಾಲಕ ಹಾಗೂ ಸಿಬ್ಬಂದಿ, ಅನುಮಾನದ ಮೇಲೆ ಈತನ ಬಗ್ಗೆ ಚಿತ್ರತಂಡಕ್ಕೆ ಮಾಹಿತಿ ನೀಡಿದ್ದಾರೆ.
ಚಿತ್ರ ಸೆರೆ ಹಿಡಿಯುವಾಗ ಚಿತ್ರ ತಂಡದವರು ಮಧುವನ್ನು ಹಿಡಿದಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Next Story