ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ: ಎ.9, 10ರಂದು ರಾಜ್ಯದ ವಿವಿಧೆಡೆಗೆ ವಿಶೇಷ ರೈಲು ವ್ಯವಸ್ಥೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.7: ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯುಗಾದಿ ಹಾಗೂ ಇನ್ನಿತರೆ ಹಬ್ಬಗಳಿಗೆ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ರಾಜ್ಯ ಸರಕಾರದ ಮನವಿಯ ಮೇರೆಗೆ ರೈಲ್ವೆ ಇಲಾಖೆಯು ಎ.9 ಹಾಗೂ 10ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಶೇಷ ರೈಲು ಮಾರ್ಗಗಳು
ಬೆಂಗಳೂರಿನಿಂದ ಬೆಳಗಾವಿಗೆ- ಎರಡು ವಿಶೇಷ ರೈಲು
ಬೆಂಗಳೂರಿನಿಂದ ಕಲಬುರಗಿಗೆ- ಎರಡು ವಿಶೇಷ ರೈಲು
ಬೆಂಗಳೂರಿನಿಂದ ಬೀದರ್ ಗೆ- ಒಂದು ವಿಶೇಷ ರೈಲು
ಬೆಂಗಳೂರಿನಿಂದ ಕಾರವಾರಕ್ಕೆ- ಎರಡು ವಿಶೇಷ ರೈಲು
ಬೆಂಗಳೂರಿನಿಂದ ವಿಜಯಪುರಕ್ಕೆ- ಒಂದು ವಿಶೇಷ ರೈಲು
ಬೆಂಗಳೂರಿನಿಂದ ಶಿವಮೊಗ್ಗಕ್ಕೆ- ಒಂದು ವಿಶೇಷ ರೈಲು
ಬೆಂಗಳೂರು- ಮೈಸೂರು- ಬೆಂಗಳೂರು ನಡುವೆ ಇಂಟರ್ಸಿಟಿ ರೈಲು ಸಂಚಾರವನ್ನು ಹೆಚ್ಚಿಸಲಾಗಿದೆ.