ಗ್ರಾಹಕ ಬಿಟ್ಟುಹೋಗಿದ್ದ ಒಂದು ಲಕ್ಷ ರೂ. ಮರಳಿಸಿದ ಚಹಾ ಅಂಗಡಿ ಮಾಲಕ
ಮಂಡ್ಯ, ಎ.18: ಮದ್ದೂರು ಪಟ್ಟಣದ ಚಹ ಅಂಗಡಿ ಮಾಲಕರೊಬ್ಬರು ತನ್ನ ಹೊಟೇಲ್ನಲ್ಲಿ ಗ್ರಾಹಕರೊಬ್ಬರು ಬಿಟ್ಟುಹೋಗಿದ್ದ ಒಂದು ಲಕ್ಷ ರೂ.ಗಳಿದ್ದ ಕೈ ಚೀಲವನ್ನು ಸದರಿ ಗ್ರಾಹಕನಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಪಕ್ಕದ ರಸ್ತೆಯಲ್ಲಿರುವ ಕುಂದಾಪುರ ಮೂಲದ ವಾಸು ಎಂಬವರ ಚಹಾ ಅಂಗಡಿಗೆ ಬಂದಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಹಣವಿದ್ದ ಕೈ ಚೀಲವನ್ನು ಮರೆತು ಹೋಗಿದ್ದರು. ಇದನ್ನು ವಾಸು ತೆಗೆದು ಇಟ್ಟಿದ್ದರು.
ಕೆಲವು ಸಮಯದ ನಂತರ ಗಾಬರಿಯಿಂದ ಬಂದ ವ್ಯಕ್ತಿ ತನ್ನ ಕೈ ಚೀಲ ಮರೆತು ಬಿಟ್ಟಿದ್ದೇನೆ ಎಂದು ಹೇಳಿದಾಗ, ವಾಸು ಹಣದ ಕೈಚೀಲವನ್ನು ಅವರಿಗೆ ಒಪ್ಪಿಸಿದರು. ವಾಸು ಅವರ ಪ್ರಾಮಾಣಿಕತೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.
Next Story