ಮೈಸೂರು ಜಿಲ್ಲಾಸ್ಪತ್ರೆಗೆ ಸಚಿವರ ಭೇಟಿ: ಕೋವಿಡ್ ಲಸಿಕೆ ವಿತರಣೆ, ಚಿಕಿತ್ಸೆ ಬಗ್ಗೆ ವಿಚಾರಣೆ
ಮೈಸೂರು : ಜಿಲ್ಲಾ ಆಸ್ಪತ್ರೆ, ಟ್ರಾಮಾ ಸೆಂಟರ್, ನಾರಾಯಣ ಆಸ್ಪತ್ರೆ, ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳಿಗೆ ಸಚಿವರಾದ ಎಸ್ ಟಿ ಸೋಮಶೇಖರ್ ಮತ್ತು ಡಾ. ಸುಧಾಕರ್ ಅವರು ಭೇಟಿ ನೀಡಿ, ಕೋವಿಡ್ ಚಿಕಿತ್ಸೆ ಬಗ್ಗೆ ವಿಚಾರಣೆ ನಡೆಸಿದರು.
ಇದೇ ವೇಳೆ ಕೋವಿಡ್ ಲಸಿಕೆ ವಿತರಣೆ, ಚಿಕಿತ್ಸೆ, ಔಷಧ ವಿತರಣೆ ಸೇರಿದಂತೆ ಸ್ವಚ್ಛತೆ ಇತ್ಯಾದಿ ಸಂಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ , ಶಾಸಕರಾದ ಎಲ್ ನಾಗೇಂದ್ರ, ವೈದ್ಯಾಧಿಕಾರಿಗಳು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.