ಕೋವಿಡ್ ನಾಗಾಲೋಟ: ರಾಜ್ಯದಲ್ಲಿ ಒಂದೇ ದಿನ 25 ಸಾವಿರ ಮಂದಿಗೆ ಪಾಸಿಟಿವ್, 123 ಸೋಂಕಿತರು ಸಾವು
ಬೆಂಗಳೂರು, ಎ.22: ರಾಜ್ಯದಲ್ಲಿ ಗುರುವಾರದಂದು 25,795 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 123 ಜನರು ಸೋಂಕಿಗೆ ಬಲಿಯಾಗಿದ್ದು, 5,624 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 12,47,997ಕ್ಕೆ ತಲುಪಿದ್ದು, 243 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 13,885ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 1,96,236ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
123 ಸೋಂಕಿತರು ಬಲಿ: ಬಾಗಲಕೋಟೆ 2, ಬಳ್ಳಾರಿ 5, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 68, ಬೀದರ್ 3, ಚಿಕ್ಕಬಳ್ಳಾಪುರ 2, ಧಾರವಾಡ 5, ಹಾಸನ 4, ಕಲಬುರಗಿ 11, ಕೊಡಗು 2, ಮಂಡ್ಯ 4, ಮೈಸೂರು 3, ಶಿವಮೊಗ್ಗ 1, ತುಮಕೂರು 5, ಉತ್ತರ ಕನ್ನಡ 2, ವಿಜಯಪುರ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 25,795 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 134, ಬಳ್ಳಾರಿ 940, ಬೆಳಗಾವಿ 255, ಬೆಂಗಳೂರು ಗ್ರಾಮಾಂತರ 405, ಬೆಂಗಳೂರು ನಗರ 15244, ಬೀದರ್ 396, ಚಾಮರಾಜನಗರ 271, ಚಿಕ್ಕಬಳ್ಳಾಪುರ 329, ಚಿಕ್ಕಮಗಳೂರು 146, ಚಿತ್ರದುರ್ಗ 142, ದಕ್ಷಿಣ ಕನ್ನಡ 474, ದಾವಣಗೆರೆ 157, ಧಾರವಾಡ 361, ಗದಗ 73, ಹಾಸನ 689, ಹಾವೇರಿ 46, ಕಲಬುರಗಿ 659, ಕೊಡಗು 156, ಕೋಲಾರ 587, ಕೊಪ್ಪಳ 121, ಮಂಡ್ಯ 385, ಮೈಸೂರು 818, ರಾಯಚೂರು 433, ರಾಮನಗರ 260, ಶಿವಮೊಗ್ಗ 207, ತುಮಕೂರು 1231, ಉಡುಪಿ 274, ಉತ್ತರ ಕನ್ನಡ 163, ವಿಜಯಪುರ 328, ಯಾದಗಿರಿ ಜಿಲ್ಲೆಯಲ್ಲಿ 111 ಪ್ರಕರಣಗಳು ಪತ್ತೆಯಾಗಿವೆ.
ರಾಜಧಾನಿಯಲ್ಲಿ 15,244 ಜನರಿಗೆ ಸೋಂಕು ದೃಢ
ರಾಜಧಾನಿಯಲ್ಲಿ ಗುರುವಾರದಂದು 15,244 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 68 ಜನರು ಮೃತಪಟ್ಟಿದ್ದಾರೆ. 2257 ಸೋಂಕಿತರು ಬಿಡುಗಡೆಯಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 5,98,919 ಕೊರೋನ ಸೋಂಕಿತರು ದೃಢಪಟ್ಟಿದ್ದು, 5,450 ಜನರು ಸೋಂಕಿಗೆ ಬಲಿಯಾಗಿದ್ದಾರೆ. 4,55,655 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.