ಜಿಂದಾಲ್ಗೆ ಭೂಮಿ ಮಾರಾಟ ವಿಚಾರದಲ್ಲಿ ನನ್ನ ನಿಲುವಿಗೆ ಬದ್ಧ: ಸಚಿವ ಆನಂದ್ ಸಿಂಗ್
ಹೊಸಪೇಟೆ, ಎ.28: ಜಿಂದಾಲ್ ಕಂಪೆನಿಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡುವ ವಿಚಾರದಲ್ಲಿ ಇಂದಿಗೂ ಸಹಮತವಿಲ್ಲ. ಆದರೆ, ಕಾರ್ಖಾನೆ ಅಸ್ತಿತ್ವದಲ್ಲಿ ಇರುವವರೆಗೂ ನೀಡಿ, ಮತ್ತೆ ಸರಕಾರ ಜಮೀನು ವಾಪಸ್ ಪಡೆಯಬೇಕು ಎಂಬುದು ನನ್ನ ನಿಲುವು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬುಧವಾರ ಹೊಸಪೇಟೆ ನಗರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ನಾನು ಅನಿವಾರ್ಯ ಕಾರಣದಿಂದ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ, ಇಂದಿಗೂ ನಾನು ನನ್ನ ನಿಲುವಿಗೆ ಬದ್ಧ ಎಂದರು.
ಸರಕಾರ ಯಾವುದೇ ಕಾರ್ಖಾನೆಗೆ ಭೂಮಿ ನೀಡಿದರು ಬಳಕೆ ಮಾಡುವವರೆಗೆ ಮಾತ್ರ ನೀಡಬೇಕು ಎಂದು ಹೇಳಿದರು.
Next Story