ತೋಟದ ಮಠದ ಸ್ವಾಮೀಜಿ ಕೊರೋನ ಸೋಂಕಿನಿಂದ ನಿಧನ
ಚಾಮರಾಜನಗರ, ಮೇ 16: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದ ತೋಟದ ಮಠದ ವೃಷಭರಾಜೇಂದ್ರ ಸ್ವಾಮೀಜಿಯವರು ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದ ತೋಟದ ಮಠದ ವೃಷಭರಾಜೇಂದ್ರ ಸ್ವಾಮಿಗಳಿಗೆ ಒಂದು ವಾರದ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು.
ಚಿಕಿತ್ಸೆಗೆಂದು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆ ಉಂಟಾಗಿ ರವಿವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಮೃತರ ಅಂತ್ಯಕ್ರಿಯೆ ಗುಂಡೇಗಾಲ ಗ್ರಾಮದ ತೋಟದ ಮಠದ ಜಮೀನಲ್ಲಿ ಕೋವಿಡ್ ನಿಯಮಾವಳಿಯಂತೆ ನಡೆಯಿತು.
Next Story