ಅರವಿಂದ ಬೆಲ್ಲದ್ ಫೋನ್ ಟ್ಯಾಪ್ ಮಾಡಲು ಅವರೇನು ಭೂಗತ ಪಾತಕಿಯೇ?: ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಜೂ.17: ತಮ್ಮ ಫೋನ್ ಟ್ಯಾಪ್ ಮಾಡಲಾಗಿದೆ ಎಂಬ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರ ಆರೋಪ ಗಂಭೀರ ಸ್ವರೂಪದ್ದು. ಈ ಆರೋಪಕ್ಕೆ ಒಳಗಾಗಿರುವುದು ಮುಖ್ಯಮಂತ್ರಿಗಳೆ ಆಗಿರುವುದರಿಂದ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆದು, ಯಾರೆಲ್ಲ ನಾಯಕರ ಫೋನ್ ಕದ್ದಾಲಿಕೆ ನಡೆಸಲಾಗಿದೆ ಎಂಬ ಸತ್ಯಸಂಗತಿ ಬೆಳಕಿಗೆ ಬರಬೇಕು ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡಿದ್ದಾರೆ.
ಅರವಿಂದ ಬೆಲ್ಲದ್ ಅವರ ಫೋನ್ ಟ್ಯಾಪ್ ಮಾಡುವ ಅಗತ್ಯವೇನಿತ್ತು? ಅವರೇನು ಭೂಗತ ಪಾತಕಿಯೇ? ದೇಶದ್ರೋಹಿಯೇ? ತಮ್ಮ ಪಕ್ಷದವರನ್ನೆ ನಂಬದ ಸರಕಾರ, ವಿರೋಧ ಪಕ್ಷಗಳ ಮುಖಂಡರ ಫೋನ್ ಟ್ಯಾಪ್ ಮಾಡಿಲ್ಲ ಎಂದು ಹೇಳಲು ಸಾಧ್ಯವೇ? ಆಪರೇಷನ್ ಕಮಲದ ಅನೈತಿಕ ಕೂಸಾದ ಬಿಜೆಪಿ ಸರಕಾರ, ಅನೈತಿಕತೆಯನ್ನೆ ಸಾಧನೆಯಾಗಿಸಿಕೊಂಡಿದೆ ಎಂದು ಅವರು ಟೀಕಿಸಿದ್ದಾರೆ.
Next Story