65 ಮಂದಿ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ
ಬೆಂಗಳೂರು, ಜೂ.30: ಪೊಲೀಸ್ ಇಲಾಖೆಯ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 65 ಮಂದಿ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪಿ.ಜಿ.ಮಧುಕರ್ (ಬೆಂಗಳೂರು ಎಟಿಸಿ), ಶಿವಾನಂದ್ ಬೇವೂರು (ಲೋಕಾಯುಕ್ತ), ಶಿಲ್ಪಾ (ಸಿಐಡಿ), ವೀರಭದ್ರಯ್ಯ ಹೀರೆಮಠ್ (ಲೋಕಾಯುಕ್ತ), ದಯಾನಂದ್ ಶೆಗುಣಿಸಿ (ಐಎಸ್ಡಿ), ಝಾವೆದ್ ಮುಸಾಪುರಿ(ಎಸಿಬಿ), ಬಸವರಾಜು ಬಿ(ಲೋಕಾಯುಕ್ತ), ರಂಗಸ್ವಾಮಿ ವೈಆರ್ (ರಾಜ್ಯ ಗುಪ್ತವಾರ್ತೆ).
ಎಲ್.ದೀಪಕ್ (ಗಿರಿನಗರ ಠಾಣೆ), ಜಿ.ಗುರುಪ್ರಸಾದ್(ಜಯನಗರ ಸಂಚಾರ ಠಾಣೆ), ವಿ.ಮಡಿವಾಳ ಚಿದಂಬರ(ಎಸಿಬಿ), ಕೆ.ರಾಜೇಂದ್ರ(ಲೋಕಾಯುಕ್ತ), ಬಸವರಾಜ್ ಜಿ.ಪುಲಾರಿ (ಎಸಿಬಿ) ಸೇರಿ 65 ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದೆ.
ತಕ್ಷಣವೇ ಜಾರಿಗೆ ಬರುವಂತೆ ಇನ್ಸ್ಪೆಕ್ಟರ್ ಗಳನ್ನು ವಿವಿಧ ಭಾಗಗಳಿಗೆ ವರ್ಗಾವಣೆ ಮಾಡಲಾಗಿದ್ದು, ಸಂಬಂಧಿಸಿದ ಘಟಕಾಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.
Next Story