ವಿದ್ಯುತ್ ಸ್ಪರ್ಶದಿಂದ 5 ವರ್ಷದ ಬಾಲಕ ಮೃತ್ಯು
ಮಂಡ್ಯ, ಜು.10: ವಿದ್ಯುತ್ ಸ್ಪರ್ಶದಿಂದ 5 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಂತೇಕಸಲಗೆರೆ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ರಾಜ್ಯ ಯುವ ಪ್ರಶಸ್ತಿ ವಿಜೇತ, ಕಲಾವಿದ ಎಸ್.ಬಸವರಾಜು ಅವರ ಪುತ್ರ ಬಿ.ಶರತ್ಕುಮಾರ್ ಮೃತ ಬಾಲಕ. ಈತ ತನ್ನ ತಾಯಿ ಜತೆ ತೋಟಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.
ಜಮೀನು ಬಳಿ ನೀರು ಪಂಪ್ಸೆಟ್ಗೆ ಅಳವಡಿಸಿದ್ದ ವೈರ್ ಮಗುವಿನ ಕಾಲಿಗೆ ತಗಲಿ ವಿದ್ಯುತ್ ಸ್ಪರ್ಶವಾಗಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಸಂಬಂಧ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story