ಚಾಮರಾಜನಗರ : ರಸ್ತೆ ಅಪಘಾತಕ್ಕೆ ಇಬ್ಬರು ಬಲಿ
ಚಾಮರಾಜನಗರ: ರಸ್ತೆ ಕಾಮಗಾರಿಗೆ ಕಾಂಕ್ರೀಟ್ ಮಿಕ್ಸರ್ ಸಾಗಾಟ ಮಾಡುತ್ತಿದ್ದ ಟಿಪ್ಪರ್ ವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಚಾಮರಾಜನಗರ ಹೊರ ವಲಯದಲ್ಲಿ ಸೋಮವಾರ ನಡೆದಿದೆ.
ಚಾಮರಾಜನಗರ ಪಟ್ಟಣದಿಂದ ನಂಜನಗೂಡು ರಸ್ತೆಯ ಮಾರ್ಗವಾಗಿ ಕಾಂಕ್ರೀಟ್ ಮಿಕ್ಸರ್ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಬೈಪಾಸ್ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಉರುಳಿ ಬಿದ್ದು, ಟಿಪ್ಪರ್ ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಚಂಚಳ್ಳಿ ಗ್ರಾಮದ ಗುತ್ತಿಗೆದಾರರ ಮಹದೇವಪ್ಪ ಎಂಬವರ ಪುತ್ರ ಲೋಕೇಶ್ (32) ಹಾಗೂ ಅದೇ ಗ್ರಾಮದ ಸುರೇಶ್ (29) ಮೃತರು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story