ಶಿವಮೊಗ್ಗ: ಶಾಸಕ ಹೆಚ್.ಹಾಲಪ್ಪಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ
ಶಿವಮೊಗ್ಗ: ಈಡಿಗ ಸಮಾಜದ ಮುಖಂಡರು, ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿರುವ ಹೆಚ್.ಹಾಲಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸಾಗರ ತಾಲೂಕಿನ ಶರಾವತಿ ಮುಳುಗಡೆ ಸಂತ್ರಸ್ತರ ಹಿತ ರಕ್ಷ ಣಾ ಹೋರಾಟ ಸಮಿತಿ ಅಧ್ಯಕ್ಷ ಕೆ.ಹೂವಯ್ಯ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಶಾಸಕ ಹಾಲಪ್ಪ ಅವರಿಗೆ ಮುಳುಗಡೆ ಪ್ರದೇಶದ ಅನುಭವ ಅವರಿಗಿದೆ. ಅವರು ಈ ವಿಚಾರದಲ್ಲಿಹೋರಾಟ ಮಾಡಿಕೊಂಡು ಬಂದವರು. ಇನ್ನೂ ಮುಳುಗಡೆ ಸಂತ್ರಸ್ಥರಿಗೆ ಭೂಮಿ ವಿಚಾರದಲ್ಲಿಇನ್ನೂ ಸಮಸ್ಯೆಗಳು ಬಗೆಹರಿದಿಲ್ಲ. ಇವರಿಗೆ ಸಚಿವ ಸ್ಥಾನ ನೀಡಿದರೆ ಸಮಸ್ಯೆ ಇತ್ಯರ್ಥ ಆಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿಮಂಜುನಾಥ್, ಪ್ರಕಾಶ್ ಬುಕ್ಕವರ, ಮಹೇಶ್ ಸಿರಿಗೆರೆ ಉಪಸ್ಥಿತರಿದ್ದರು.
Next Story