ಶಿವಮೊಗ್ಗ: ಗಾಂಜಾ ಮಾರಾಟ; ನಾಲ್ವರು ಆರೋಪಿಗಳ ಬಂಧನ
ಶಿವಮೊಗ್ಗ, ಸೆ.12: ಕಾರಿನಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಆರೋಪಿತರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ನಗರ ಸಮೀಪದ ಕಲ್ಲೂರು ಗ್ರಾಮದ ಚಾನೆಲ್ ಬಳಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತುಂಗಾನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕಲ್ಲೂರು ಗ್ರಾಮದ ಚಾನೆಲ್ ಬಳಿ ಕಾರಿನಲ್ಲಿ ಪ್ರತಿದಿನ ಬಂದು ಗಾಂಜಾ ಮಾರಾಟ ಮಾಡುತ್ತಿದ್ದರು.ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಇದೇ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಕಾರಿನಲ್ಲಿ ಬಂದು ಗಾಂಜಾ ಮಾರುತ್ತಿದ್ದವರು ಊರುಗಡೂರು,ಸೂಳೆಬೈಲಿನವರು ಎಂದು ತಿಳಿದು ಬಂದಿದೆ.ಬಂಧಿತರಲ್ಲಿ ಇಬ್ಬರು ಪ್ಲಂಬರ್ ಹಾಗೂ ಒಬ್ಬರು ಪೆಂಟರ್ ವೃತ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕೆಜಿಗಟ್ಟಲೆ ಗಾಂಜಾ ವಶಕ್ಕೆ
ಬಂಧಿತರಿಂದ ಪೊಲೀಸರು 2 ಕೆಜಿ 120 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.ಇದರ ಅಂದಾಜು ಮೌಲ್ಯ 80 ಸಾವಿರ ರೂ ಎಂದು ಅಂದಾಜಿಸಲಾಗಿದೆ. ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ಎಂ.ಎಸ್,ಸಿಬ್ಬಂದಿಗಳಾದ ಆರುಣ್ ಕುಮಾರ್,ಕಿರಣ್ ಮೋರೆ,ಸಂದೀಪ್,ಕಾಂತರಾಜ್ ಭಾಗಿಯಾಗಿದ್ದರು.