ಶಿವಮೊಗ್ಗ : ಯುವಕನ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ
ಶಿವಮೊಗ್ಗ (ಸೆ.19): ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿ ಟಿಪ್ಪುನಗರದಲ್ಲಿ ಶನಿವಾರ ರಾತ್ರಿ ನಡೆದ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾರ್ನಾಮಿ ಬೈಲು ನಿವಾಸಿ ಇರ್ಫಾನ್(28) ಎಂಬುವವನಿಗೆ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಟಿಪ್ಪುನಗರ ಏಳನೇ ಕ್ರಾಸ್ನ ನಾಲ್ಕನೇ ಅಡ್ಡರಸ್ತೆ ಬಳಿ ಶನಿವಾರ ರಾತ್ರಿ ಬಂದಿದ್ದಾಗ ಗಾಂಜಾ ಪ್ರಕರಣವೊಂದರ ವಿಚಾರವಾಗಿ ಅಸಾದ್ ಮತ್ತು ಶಾಬೀರ್ ಜೊತೆ ಜಗಳವಾಗಿದೆ. ಅಲ್ಲಿಯೇ ಇದ್ದ ಏಳೆಂಟು ಯುವಕರು ಜಗಳದಲ್ಲಿ ಸೇರಿಕೊಂಡಿದ್ದಾರೆ. ಪರಸ್ಪರ ಮಾತಿಗೆ ಮಾತು ಬೆಳೆದಿದ್ದು, ಇರ್ಫಾನ್ ಚಾಕು ತೆಗೆದು ಒಬ್ಬನ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಅದೇ ಚಾಕು ಕಸಿದುಕೊಂಡು ಎದುರಾಳಿಗಳು ಎದೆಯ ಭಾಗಕ್ಕೆ ಚುಚ್ಚಿ ಹತ್ಯೆ ನಡೆಸಿದ್ದಾರೆ.
Next Story