ಇದು ಟಾಂಗಾ ಚಲೋ ಅಲ್ಲ, ಡಿಕೆಶಿ, ಸಿದ್ದರಾಮಯ್ಯ ನಡುವಿನ ಟಾಂಗ್ ಚಲೋ: ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು
ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ವಿಧಾನಸೌಧಕ್ಕೆ ಕಾಂಗ್ರೆಸ್ ನಡೆಸಿದ ಟಾಂಗಾ ಜಾಥಾ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಇದು ಟಾಂಗಾ ಚಲೋ ಅಲ್ಲ, ಡಿಕೆಶಿ, ಸಿದ್ದರಾಮಯ್ಯ ನಡುವಿನ ಟಾಂಗ್ ಚಲೋ ಎಂದು ಟೀಕಿಸಿದೆ.
ಬದ್ಧ ವೈರಿಗಳಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಟಾಂಗಾ ಜಾಥಾಕ್ಕೆ ಹೊರಟಿದ್ದಾರೆ. ಮಾನಸಿಕವಾಗಿ ವಿರುದ್ಧ ದಿಕ್ಕಿಗೆ ಮುಖಮಾಡಿ ನಿಂತುಕೊಂಡು, ನಾಟಕೀಯವಾಗಿ ಒಟ್ಟಾಗಿದ್ದೇವೆ ಎಂದು ತೋರ್ಪಡಿಸಲು ಒಟ್ಟಿಗೆ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
'ಕಾಂಗ್ರೆಸ್ ಪಕ್ಷ ಈಗ ದಿನಕ್ಕೊಂದು ನಾಟಕ ಆರಂಭಿಸಿದೆ. ಸೈಕಲ್ ಜಾಥಾ ಆಯ್ತು, ಎತ್ತಿನ ಗಾಡಿ ಹೋರಾಟ ಮುಗಿಯಿತು, ಇಂದು ಟಾಂಗಾ ಓಟ! ಬೆಂಜ್, ಆಡಿ ಸಹಿತ ದುಬಾರಿ ಕಾರುಗಳಲ್ಲಿ ಬಂದು ಟಾಂಗಾ ಏರಿದರೆ ಜನ ನಂಬುತ್ತಾರೆ ಎಂದು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ' ಎಂದು ಹೇಳಿದೆ.
'ಕಾಂಗ್ರೆಸ್ಸಿಗರೇ, ನಿಮ್ಮ ಬೂಟಾಟಿಕೆ ತಿಳಿಯದಷ್ಟು ಮೂರ್ಖರಲ್ಲ ನಮ್ಮ ಜನತೆ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪಕ್ಷ ಈಗ ದಿನಕ್ಕೊಂದು ನಾಟಕ ಆರಂಭಿಸಿದೆ. ಸೈಕಲ್ ಜಾಥಾ ಆಯ್ತು, ಎತ್ತಿನ ಗಾಡಿ ಹೋರಾಟ ಮುಗಿಯಿತು, ಇಂದು ಟಾಂಗಾ ಓಟ!
— BJP Karnataka (@BJP4Karnataka) September 24, 2021
ಬೆಂಜ್, ಆಡಿ ಸಹಿತ ದುಬಾರಿ ಕಾರುಗಳಲ್ಲಿ ಬಂದು ಟಾಂಗಾ ಏರಿದರೆ ಜನ ನಂಬುತ್ತಾರೆ ಎಂದು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ.
ಕಾಂಗ್ರೆಸ್ಸಿಗರೇ, ನಿಮ್ಮ ಬೂಟಾಟಿಕೆ ತಿಳಿಯದಷ್ಟು ಮೂರ್ಖರಲ್ಲ ನಮ್ಮ ಜನತೆ.