ರಾಜ್ಯದಲ್ಲಿ ವಾರದೊಳಗೆ ಮಹತ್ವದ ಬದಲಾವಣೆ ಆಗಲಿದೆ, ಕಾದು ನೋಡಿ: ಶಾಸಕ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್ (ಫೈಲ್ ಫೋಟೋ)
ಬೆಳಗಾವಿ, ಸೆ.25: ''ರಾಜ್ಯದಲ್ಲಿ ವಾರದೊಳಗೆ ಮಹತ್ವದ ಬದಲಾವಣೆ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಕಾದು ನೋಡಿ'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಇಲ್ಲಿನ ಗಾಂಧಿ ಭವನದಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.
"ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೆರಳಲ್ಲ. ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಶಕ್ತಿ ಮತ್ತು ಅನುಭವ ಅವರಿಗಿದೆ. ಇನ್ನೊಂದು ವಾರದಲ್ಲಿ ಅವರು ಕೈಗೊಳ್ಳಲಿರುವ ಮಹತ್ವದ ನಿರ್ಧಾರ ಇದಕ್ಕೆ ನಿದರ್ಶನವಾಗಲಿದೆ. ಕಾದು ನೋಡಿ" ಯತ್ನಾಳ್ ಎಂದು ತಿಳಿಸಿದ್ದಾರೆ.
Next Story